ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

JANANUDI.COM NETWORK

ಕುಂದಾಪುರ,ಅ.15:ಇಂದು ಬ್ಲಾಕ್ ಕಾಂಗ್ರೆಸ್ ಕುಂದಾಪುರ ಕಚೇರಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಸರಳವಾಗಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಧ್ವಜಾ ರೋಹಣವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ನೇರವೇರಿಸಿ ‘ದೇಶದ ಸರ್ವಾಂಗೀಣ ಅಭಿವ್ರದ್ದಿಗೆ ಕಾಂಗ್ರೆಸ್ ಮಾರ್ಗಸೂಚಿಗಳು ಅತೀ ಅಗತ್ಯವೆಂದು’ ಅಭಿಪ್ರಾಯ ಪಟ್ಟರು’
ಮುಖ್ಯ ಅತಿಥಿಗಳಾದ ಟ್ಯಾಕ್ಸಿ ಮತ್ತು ವಾಹನ ಚಾಲಕ/ಮಾಲಕ ಸಂಘದ ಅಧ್ಯಕ್ಷರಾದ ಲಕ್ಷಣ ಶೆಟ್ಟಿ ಮತ್ತು ಪುರಸಭ ಸದಸ್ಯರಾದ ಪ್ರಭಾವತಿ ಶೆಟ್ಟಿ ಶುಭ ನುಡಿಗಳನ್ನಾಡಿದರು.ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಕುಮಾರ್ ಖಾರ್ವಿ ಧ್ವಜಾ ರೋಹಣದ ಕಮಾಂಡ್ ನೀಡಿದರು. ರಾಜ್ಯ ಐ.ಟಿ.ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ಶೆಟ್ಟಿ, ಯುವ ಮುಖಂಡರಾದ ಕೋಟ ಸುನೀಲ್ ಪೂಜಾರಿ, ಶಸಿರಾಜ್ ಪೂಜಾರಿ, ಐ ಟಿ ಶೇಲ್ ಅಧ್ಯಕ್ಷರಾದ ಕೆ. ಶಿವಕುಮಾರ್, ಅಶ್ವಥ್ ಕುಮಾರ್, ರಘುರಾಮ್ ನಾಯ್ಕ್, ಶಿಶಿರ, ಹೇಮಂತ ಕುಮಾರ್ ಕೆ. ಸಮಂತ್ ಕುಮಾರ್ ಕೆ., ರಘುರಾಮ್ ನಾಯ್ಕ್, ಪ್ರವೀಣ್, ಪಲ್ಲವಿ ಇನ್ನಿತರರು ಉಅಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ ವಂದಿಸಿದರು.