ಕುಂದಾಪುರ ಗಣೇಶ ಚತುರ್ಥಿ: ರೊಟಾರ್ಯಾಕ್ಟನಿಂದ ಭಕ್ತಿಗೀತೆ ಗಣೇಶನ ಚಿತ್ರ ಬಿಡಿಸುವ ಸ್ಫರ್ಧೆ

JANANUDI.COM NETWORK

ಕುಂದಾಪುರ ಗಣೇಶ ಚತುರ್ಥಿ: ರೊಟಾರ್ಯಾಕ್ಟನಿಂದ ಭಕ್ತಿಗೀತೆ ಗಣೇಶನ ಚಿತ್ರ ಬಿಡಿಸುವ ಸ್ಫರ್ಧೆ


ಕುಂದಾಪುರ, ಆ.31: ಗಣೇಶ ಚತುರ್ಥಿಯ ಪ್ರಯುಕ್ತ ರೊಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ಭಕ್ತಿಗೀತೆ ಗಣೇಶನ ಚಿತ್ರ ಬಿಡಿಸುವ ಸ್ಫರ್ಧೆ ಭಂಡಾರ್‍ಕಾರ್ಸ್ ಪದವಿ ಪೂರ್ವಕಾಲೇಜಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರೊಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ರೋ|ಆಲ್ಡ್ರೀನ್ ಡಿಸೋಜಾ, ಕಾರ್ಯದರ್ಶಿ ವಿನಾಯಕ ಗಾಣಿಗಾ, ಖಜಾಂಚಿ ವಿಲ್ಬನ್, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಸ್ಫರ್ಧೆಯ ಪ್ರಾಯೋಜಕರಾದ ‘ಕೋಸ್ತಾಸ್’ ಬ್ಯಾಟರಿಯ ಮಾಲೀಕರದಾದ ಸಾವಿಕ್ ಡಿಕೋಸ್ತಾ ಉಪಸ್ಥಿತರಿದ್ದು, ಶ್ರೀಮತಿ ಚೈತ್ರ, ಶ್ರೀ ಗುರುರಾಜ್, ಶ್ರೀ ರಿತೇಶ್ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾದ್ಯಾಪಕಿ ಶ್ರೀಮತಿ ಸರೋಜ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.