ಕುಂದಾಪುರದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ “ಗೈಡ್ಸ್ ರಾಜ್ಯ ಪುರಸ್ಕಾರ”

JANANUDI.COM NETWORK

ಕುಂದಾಪುರದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ “ಗೈಡ್ಸ್ ರಾಜ್ಯ ಪುರಸ್ಕಾರ”
ಭಾರತ್ ಸ್ಕೌಟ್/ಗೈಡ್ಸ್ ರಾಜ್ಯ ಸಂಸ್ಥೆ ಬೆಂಗಳೂರು, ಇವರು ನಡೆಸಿದ “ಗೈಡ್ಸ್ ರಾಜ್ಯ ಪುರಸ್ಕಾರ”ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಂದಾಪುರದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕು. ರಂಜಿತಾ ಶೆಟ್ಟಿ ಹಾಗೂ ಕು. ಸಿಂಚನ ಶೆಟ್ಟಿ ಇವರು ಮಾನ್ಯ ರಾಜ್ಯ ಪಾಲರಿಂದ ಪಡೆದ “ ರಾಜ್ಯ ಪುರಸ್ಕಾರ” ಪ್ರಶಸ್ತಿಯನ್ನು ಮುಖ್ಯೋಪಾಧ್ಯಾಯಿನಿ ಭಗಿನಿ ಸಿಲ್ವಿಯಾ ಸುವಾರಿಸ್ ಹಾಗೂ ಗೈಡ್ಸ್ ಶಿಕ್ಷಕಿ ಶ್ರೀಮತಿ ಸೆಲಿನ್ ಬರೆಟ್ಟೊರವರ ನೇತ್ರತ್ವದಲ್ಲಿ ದಿನಾಂಕ 29.09.2020 ರಂದು ನೀಡಿ ಗೌರವಿಸಲಾಯಿತು.