ಕಥೊಲಿಕ್ ಸಭಾ ಕುಂದಾಪುರ ಘಟಕದ ನೂತನ ಅಧ್ಯಕ್ಷರಾಗಿ ಬರ್ನಾಡ್ ಡಿಕೋಸ್ತಾ

JANANUDI.COM NETWORK

 

ಕಥೊಲಿಕ್ ಸಭಾ ಕುಂದಾಪುರ ಘಟಕದ ನೂತನ ಅಧ್ಯಕ್ಷರಾಗಿ ಬರ್ನಾಡ್ ಡಿಕೋಸ್ತಾ 

 

ಅಧ್ಯಕ್ಷರು:ಬರ್ನಾಡ್ ಜೆ.ಡಿಕೋಸ್ತಾ

ಕುಂದಾಪುರ,ಮಾ.16: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ, ಪದಾಧಿಕಾರಿಗಳ ಚುನಾವಣೆ ಕಳೆದ ವಾರ ಇಗರ್ಜಿಯ ಸಭಾಭವನದಲ್ಲಿ ನೆಡೆದ ಚುನಾವಣೆಯಲ್ಲಿ 2020-21 ಸಾಲಿನ ಸಾಹಿತಿ ಪತ್ರಕರ್ತ ಬರ್ನಾಡ್ ಜೆ.ಡಿಕೋಸ್ತಾ 2020-21 ಸಾಲಿನ ಅಧ್ಯಕ್ಷರಾಗಿ ಅವೀರೊದವಾಗಿ ಆಯ್ಕೆಗೊಂಡರು,

ಕಾರ್ಯದರ್ಶಿ: ಪ್ರೇಮಾ ಡಿಕುನ್ಹಾ

ನಿಕಟ ಪೂರ್ವ ಅಧ್ಯಕ್ಷರು ವಾಲ್ಟರ್ ಜೆ.ಡಿಸೋಜಾ, ನಿಯೋಜಿತ ಅಧ್ಯಕ್ಷೆಯಾಗಿ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷರಾಗಿ ವಿನ್ಸೆಂಟ್ ಡಿಸೋಜಾ, ಕಾರ್ಯದರ್ಶಿಯಾಗಿ ಪ್ರೇಮಾ ಡಿಕುನ್ಹಾ, ಸಹ ಕಾರ್ಯದರ್ಶಿಯಾಗಿ ವಿನಯಾ ಡಿಕೋಸ್ತಾ, ಖಚಾಂಚಿಯಾಗಿ ಶೈಲಾ ಲುವಿಸ್, ಸಹ ಖಚಾಂಚಿಯಾಗಿ, ಲೋನಾ ಲುವಿಸ್ ಆಮ್ಚೊ ಸಂದೇಶ್ ಪ್ರತಿನಿಧಿಯಾಗಿವಿಲ್ಸನ್ ಡಿಆಲ್ಮೇಡಾ, ರಾಜಕೀಯ ಸಂಚಾಲಕಾರಾಗಿ ಜೋನ್ಸನ್ ಡಿಆಲ್ಮೇಡಾ, ಸರ್ಕಾರಿ ಸವಲತ್ತು ಸಂಚಾಲಕರಾಗಿ ವಿನೋದ್ ಕ್ರಾಸ್ಟೊ, ಲೆಕ್ಕ ಪರಿಶೋಧಕರಾಗಿ ಡಾ|ಸೋನಿ ಡಿಕೋಸ್ತಾ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಶಾಲೆಟ್ ರೆಬೆಲ್ಲೊ, ಮಾರ್ಕ್ ಡಿಸೋಜಾ, ಮೈಕಲ್ ಗೊನ್ಸಾಲ್ವಿಸ್, ನಿರ್ಮಲ ಡಿಸೋಜಾ ಇವರುಗಳು ಆಯ್ಕೆಗೊಂಡರು. ಚುನಾವಣ ಪ್ರಕ್ರಿಯೆಯನ್ನು ಕಥೊಲಿಕ್ ಸಭಾ ಕೇಂದ್ರಿಯಾ ಸಮಿತಿಯ ಮಾಜಿ ಅಧ್ಯಕ್ಷ ಕಿರಣ್ ಕ್ರಾಸ್ತಾ ನಡೆಸಿಕೊಟ್ಟರು. ಅಧ್ಯಾತ್ಮಿಕ ನಿರ್ದೇಶಕರಾದ ಅ|ವ|ಸ್ಟ್ಯಾನಿ ತಾವ್ರೊ ಆರಿಸಿ ಬಂದವರನ್ನು ಶುಭ ಹಾರೈಸಿದರು.