ಕೆಥೊಲಿಕ್ ಸಭಾ ಕುಂದಾಪುರ – ಪಡಿತರ ಕಿಟ್ ವಿತರಣೆ

ಕುಂದಾಪುರ: ಕೆಥೊಲಿಕ್ ಸಭಾ ಕುಂದಾಪುರ ಘಟಕ ವತಿಯಿಂದ ಕಿಟ್ ವಿತರಣಾ ಕಾರ್ಯಕ್ರಮವು ಇಲ್ಲಿನ ಹೋಲಿ ರೋಸರಿ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಹೋಲಿ ರೋಸರಿ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ಅತಿವಂದನೀಯ ಸ್ಟ್ಯಾನಿ ತಾವ್ರೋ ಮಾತನಾಡಿ, ಕೊರೋನ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ ಕೆಥೊಲಿಕ್ ಸಭಾದ ಸೇವೆ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವಂ. ವಿಜಯ ಡಿಸೋಜ, ಕೆಥೊಲಿಕ್ ಸಭಾ ಘಟಕದ ಅಧ್ಯಕ್ಷರಾದ ಬರ್ನಾರ್ಡ್ ಡಿಕೋಸ್ಟಾ, ಪದಾಧಿಕಾರಿಗಳಾದ ಡಾ. ಸೋನಿ ಡಿಕೋಸ್ಟಾ, ವಿನ್ಸೆಂಟ್ ಡಿಸೋಜ, ಶೈಲಾ ಅಲ್ಮೇಡಾ, ಪ್ರೇಮಾ ಡಿಕುನ್ಹಾ, ಮಾರ್ಕ್ ಡಿಸೋಜಾ, ಉಲ್ಲಾಸ್ ಕ್ರಾಸ್ತಾ, ಲೋನಾ ಡಿಸೋಜ, ವಿನೋದ್ ಕ್ರಾಸ್ಟೋ ಮತ್ತು ಪಾಲನಾ ಮಂಡಳಿಯ ಪದಾಧಿಕಾರಿಗಳಾದ ಲೂವಿಸ್ ಫರ್ನಾಂಡೀಸ್, ಆಶಾ ಕಾರ್ವಾಲ್ಲೊ ಉಪಸ್ಥಿತರಿದ್ದರು.

ಕೆಥೋಲಿಕ್ ಸಭಾ ನಿಯೋಜಿತ ಅಧ್ಯಕ್ಷರಾದ ಜೂಲಿಯಟ್ ಪಾಯ್ಸ್ ಸ್ವಾಗತಿ, ವಿಲ್ಸನ್ ಅಲ್ಮೇಡಾ ನಿರೂಪಿಸಿ ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ ವಂದಿಸಿದರು.