ಭಾ. ರೆ. ಕ್ರಾಸ್. ಕುಂದಾಪುರ,ಆಚಾರ್ಯ ಮಠ ಕುಂದಾಪುರ, ಕಸ್ತೂರಬಾ ಮೆ. ಕಾ. ಮಣಿಪಾಲ, ಸಹಯೋಗದೊಂದಿಗೆ ಆಚಾರ್ಯ ಮಠದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಆಚಾರ್ಯ ಮಠ ಕುಂದಾಪುರ ಹಾಗೂ ಕಸ್ತೂರಬಾ ಮೆಡಿಕಲ್ ಕಾಲೇಜು ಮಣಿಪಾಲ ಇವರ ಸಹಯೋಗದೊಂದಿಗೆ ಆಚಾರ್ಯ ಮಠ ದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸುಮಾರು77 ಜನರಿಗೆ ಸಂಪೂರ್ಣ ರಕ್ತ ಪರೀಕ್ಷೆ, 165 ಜನರಿಗೆ ವಿವಿಧ ಆರೋಗ್ಯ ತಪಾಸಣೆ, 36 ಜನರ E.C.G ಟೆಸ್ಟ್ ಮಾಡಲಾಯಿತು. ಈ ಕಾರ್ಯಕ್ರಮ ವನ್ನು ವೆಂಕಟರಮಣ ದೇವಸ್ಥಾನದ ಅದ್ಯಕ್ಷರಾದ ರಾಧಾಕೃಷ್ಣ ಶೆಣೈ ದೀಪ ಬೆಳಗಿ ಉದ್ಗಾಟನೆ ಮಾಡಿ ಆಶೀರ್ವಚನ ಗೈದರು. ಮುಖ್ಯ ಅತಿಥಿಗಳಾದ ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಆಚಾರ್ಯ ಸಹೋದರರು, ಅರ್ಚಕರು, ಸಮಿತಿಯ ಸದಸ್ಯರು, ಮಣಿಪಾಲ್ ಆಸ್ಪತ್ರೆಯ ವೈದ್ಯರು ಗಳು ಮತ್ತು ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಉಪಸ್ಥಿತರಿದ್ದರು. ಡಾ. ಸೋನಿ ಡಿಕೋಸ್ಟಾ ನಿರೂಪಿಸಿ ವಂದಿಸಿದರು. ಅಲ್ಲದೇ ರೆಡ್ ಕ್ರಾಸ್ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಮುತ್ತಯ್ಯ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ನಾರಾಯಣ ದೇವಾಡಿಗ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

Bikarnakatte -The annual feast of Infant Jesus Shrine ends on a grand note / ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬವು ಭವ್ಯವಾದ ಟಿಪ್ಪಣಿಯಲ್ಲಿ ಸಮಾಪನಗೊಂಡಿತು

Mangalore: The annual feast of Infant Jesus 2023 at the holy shrine of Bikarnakatte in the city culminated with a feast mass solemnized by Rev Fr Maxim Noronha, Vicar General, Diocese of Mangalore on Sunday, January 15.

In his homily, the vicar encouraged the faithful to follow not the ‘world’s way’, but ‘Christ’s way’. “This world today needs the divine touch of Christ who won sin and death; he can give the world true peace and freedom. As psalms tell us, that the lord watches over the way of the just, but the way of the wicked vanishes, Christ saves his disciples from despair and sadness. The disciples who left Jerusalem felt the divine intervention and they returned with joy. So also Christ today tirelessly accompanies us and leads us to the green pastures”, he said.

Rev Fr Pius James D Souza, OCD, Definitor General presided over the 10.30 mass in the morning which was specially dedicated to the children. Similarly, there were other masses in Konkani, Kannada and Malayalam (Syro Malabar rite) whole day. Along with religious priests and nuns, thousands of devotees participated in the feast. A huge number of devotees also visited the shrine on two days of the feast. The feast started with nine-day Novena prayers, which were held from January 5 to 13, during which there were masses offered every day in different languages.

ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬವು ಭವ್ಯವಾದ ಟಿಪ್ಪಣಿಯಲ್ಲಿ ಸಮಾಪನಗೊಂಡಿತು

ಮಂಗಳೂರು: ನಗರದ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರದ 2023 ರ ವಾರ್ಷಿಕ ಹಬ್ಬವು ಜನವರಿ 15 ರ ಭಾನುವಾರದಂದು ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಫಾ.ಮಾಕ್ಸಿಮ್ ನೊರೊನ್ಹಾ ಅವರ ನೇತೃತ್ವದಲ್ಲಿ ಹಬ್ಬದ ಸಾಮೂಹಿಕವಾಗಿ ಬಲಿದಾನದೊಂದಿಗೆ ಸಮಾಪನಗೊಂಡಿತು.

ತನ್ನ ಧರ್ಮೋಪದೇಶದಲ್ಲಿ, ಧರ್ಮಾಧಿಕಾರಿಯು ನಿಷ್ಠಾವಂತರನ್ನು ‘ಪ್ರಪಂಚದ ಮಾರ್ಗ’ ಅಲ್ಲ, ಆದರೆ ‘ಕ್ರಿಸ್ತನ ಮಾರ್ಗ’ ಅನುಸರಿಸಲು ಪ್ರೋತ್ಸಾಹಿಸಿದರು. “ಈ ಜಗತ್ತಿಗೆ ಇಂದು ಪಾಪ ಮತ್ತು ಮರಣವನ್ನು ಗೆದ್ದ ಕ್ರಿಸ್ತನ ದೈವಿಕ ಸ್ಪರ್ಶದ ಅಗತ್ಯವಿದೆ; ಅವನು ಜಗತ್ತಿಗೆ ನಿಜವಾದ ಶಾಂತಿ ಮತ್ತು ಸ್ವಾತಂತ್ರ್ಯವನ್ನು ನೀಡಬಲ್ಲನು. ಕೀರ್ತನೆಗಳು ನಮಗೆ ಹೇಳುವಂತೆ, ಭಗವಂತ ನೀತಿವಂತನ ಮಾರ್ಗವನ್ನು ನೋಡುತ್ತಾನೆ, ಆದರೆ ದುಷ್ಟರ ಮಾರ್ಗವು ಕಣ್ಮರೆಯಾಗುತ್ತದೆ. ಕ್ರಿಸ್ತನು ತನ್ನ ಶಿಷ್ಯರನ್ನು ಹತಾಶೆ ಮತ್ತು ದುಃಖದಿಂದ ರಕ್ಷಿಸುತ್ತಾನೆ, ಜೆರುಸಲೆಮ್ ತೊರೆದ ಶಿಷ್ಯರು ದೈವಿಕ ಹಸ್ತಕ್ಷೇಪವನ್ನು ಅನುಭವಿಸಿದರು ಮತ್ತು ಅವರು ಸಂತೋಷದಿಂದ ಹಿಂದಿರುಗಿದರು. ಹಾಗೆಯೇ ಕ್ರಿಸ್ತನು ಇಂದು ದಣಿವರಿಯಿಲ್ಲದೆ ನಮ್ಮೊಂದಿಗೆ ಮತ್ತು ಹಸಿರು ಹುಲ್ಲುಗಾವಲುಗಳತ್ತ ನಮ್ಮನ್ನು ಕರೆದೊಯ್ಯುತ್ತಾನೆ,” ಎಂದು ಅವರು ಹೇಳಿದರು.

ಬೆಳಗ್ಗೆ 10.30ಕ್ಕೆ ವಿಶೇಷವಾಗಿ ಮಕ್ಕಳಿಗೆ ಸಮರ್ಪಿಸಲಾಗಿದ್ದ ಮಹಾಪೂಜೆಯ ಅಧ್ಯಕ್ಷತೆಯನ್ನು ಡೆಫಿನಿಟರ್ ಜನರಲ್ ಒಸಿಡಿ ವಂದನೀಯ ಫಾದರ್ ಪಿಯುಸ್ ಜೇಮ್ಸ್ ಡಿ ಸೋಜಾ ವಹಿಸಿದ್ದರು. ಅದೇ ರೀತಿ, ಕೊಂಕಣಿ, ಕನ್ನಡ ಮತ್ತು ಮಲಯಾಳಂನಲ್ಲಿ (ಸಿರೋ ಮಲಬಾರ್ ವಿಧಿಯಲ್ಲಿ) ಬಲಿದಾನಗಳು ನಡೆದವು. ಧರ್ಮಗುರುಗಳು ಮತ್ತು ಸನ್ಯಾಸಿನಿಯರು ಸೇರಿದಂತೆ ಸಾವಿರಾರು ಭಕ್ತರು ದಿನವಿಡಿ ಉತ್ಸವದಲ್ಲಿ ಪಾಲ್ಗೊಂಡರು. ಹಬ್ಬದ ಎರಡು ದಿನಗಳಂದು ಅಪಾರ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದರು. ಹಬ್ಬವು ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ಇದು ಜನವರಿ 5 ರಿಂದ 13 ರವರೆಗೆ ನಡೆಯಿತು, ಹಬ್ಬವನ್ನು ಎರಡು ದಿನ ಆಚರಿಸಲಾಯಿತು. ಭಾನುವಾರ 15 ರಂದು ವಾರ್ಷಿಕ ಹಬ್ಬ ಸಮಾರೋಪಗೊಂಡಿತು. ಈ ಸಮಯದಲ್ಲಿ ವಿವಿಧ ಭಾಷೆಗಳಲ್ಲಿ ಪ್ರತಿದಿನ ಸಾಮೂಹಿಕವಾಗಿ ಅರ್ಪಿಸಲಾಯಿತು.

ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸಂತ ಜೊಸೇಫ್ ವಾಜ್ ರವರ ಸಂಭ್ರಮದ ವಾರ್ಷಿಕ ಹಬ್ಬ

ಕುಂದಾಪುರ, ಜ.15: ಕುಂದಾಪುರ ರೋಜರಿ ಅಮ್ಮನವರ ಚರ್ಚಿನಲ್ಲಿ 332 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕನಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದ ಧರ್ಮಗುರು ಜೋಸೆಫ್ ವಾಜ್ ಕೆನರಾದಾಂತ್ಯ ಯೇಸು ಕ್ರಿಸ್ತರ ಬೋಧನೆ ಮಾಡಿ, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿ ದ್ಯಾನ ಮಗ್ನರಾಗಿದ್ದ ಅದ್ಬುತ ನಡೆದಿತ್ತು. ಅದ ನಂತರ ಅವರು ಶ್ರೀಲಂಕಕ್ಕೆ ತೆರಳಿ ಹಲವು ಅದ್ಬುತಗಳನ್ನು ಮಾಡಿ ಕಥೊಲಿಕರಲ್ಲಿ ಅತ್ಯುನ್ನತ್ತ ಸಂದ ಪದವಿ ಪಡೆದರು. ಅವರ ವಾರ್ಷಿಕ ಹಬ್ಬವು ಜನವರಿ 14 ರಂದು ವಲಯ ಮಟ್ಟದಲ್ಲಿ ಆಚರಿಸಲಾಯಿತು.
ಸಂತ ಜೋಸೆಫ್ ವಾಜರ ವಾರ್ಷಿಕ ಹಬ್ಬದಂದು ಮಂಗಳೂರು ದೆರೆಬೈಲ್ ಚರ್ಚಿನ ಧರ್ಮಗುರು ವಂ|ಜೋಸೆಫ್ ಮಾರ್ಟಿಸ್ ಪವಿತ್ರ ಬಲಿದಾನವನ್ನು ಅರ್ಪಿಸಿ “ಸಂತ ಜೋಸೆಫ್ ವಾಜ್ ಕ್ರಿಸ್ತನ ನೀಜ ಸೇವಕಾನಾಗಿದ್ದರು, ಅವರೊಬ್ಬ ರಾಜಿ ಸಂಧಾನದ ದೂತ’ ಎಂದು ತಿಳಿಸಿ “ಸಂತ ಜೋಸೆಫ್ ವಾಜರು ಕುಂದಾಪುರ ಕೇಂದ್ರವನ್ನಾಗಿಟ್ಟುಕೊಂಡು ಕುಂದಾಪುರ ವಲಯದಲ್ಲಿ (ಅಂದಿನ ಕಾಲದಲ್ಲಿ ಮಂಗಳೂರು ಮತ್ತು ಕುಂದಾಪುರ ಎರಡೇ ವಲಯಗಳಿದ್ದವು) ಸೇವೆ ನೀಡಲು ಬಂದ ಸಮಯದಲ್ಲಿ ಇಲ್ಲಿನ ಪರಿಸ್ಥಿತಿ ಸರಿಯಾಗಿರಲಿಲ್ಲ, ಪೋರ್ಚುಗೀಸರ ರಾಜನ ಪಂಗಡ, ಮತ್ತೊಂದೆಡೆ ಸರ್ವೊಚ್ಚ ಗುರು ಪೋಪ್ ಇವರ ಪಂಗಡ ಎಂದು ಕ್ರೈಸ್ತರು ಕಠಿಣ ಪರಿಸ್ಥಿಯಲ್ಲಿ ಇದ್ದರು, ಅವಾಗ ಪೋಪ್ ಪಂಗಡ ಮುಖ್ಯಸ್ಥರಲ್ಲಿ ನನಗೆ ಕ್ರಿಸ್ತನ ಸೇವೆ ಮಾಡುವುದೇ ಮುಖ್ಯ ಎಂದು ಅವರಿಗೆ ವೀಧೆಯರಾಗಿ ಮಹತ್ತರ ಸೇವೆ ನೀಡುತ್ತಾರೆ. ಮುಂದೆ ಪೋಪ್ ಮತ್ತು ಪೋರ್ಚುಗೀಸರ ರಾಜರ ವಿವಾದ ತಣ್ಣಗೆ ಆಗಲು ಕಾರಣರಾಗಿ, ಕೆನರಾದಲ್ಲಿರುವ ಎಲ್ಲಾ ಕ್ರೈಸ್ತರಿಗೆ ಧಾರ್ಮಿಕ ಸೇವೆ ಸಿಗುವಂತೆ ಮಾಡಿದ ಶ್ರೇಷ್ಠ ಧರ್ಮಗುರುಗಳು. ಅವರು ಕುಂದಾಪುರದ ಆಸು ಪಾಸು ಸೇವೆ ನೀಡುತ್ತಿರುವಾಗ ಕಾಲ್ನಡಿಗೆಯಲ್ಲಿ ನಡೆದಾಡಿದ ಈ ಕುಂದಾಪುರದ ಸ್ಥಳ ಪವಿತ್ರವಾದುದು. ಇಂತಹ ಮಾಹಾನ ಸಂತರು ನಿಮ್ಮ ಇಗರ್ಜಿಯ ಧರ್ಮಗುರುಳಾಗಿದ್ದವರೆಂದು ನೀವು ತುಂಬಾ ಹೆಮ್ಮೆ ಪಟ್ಟುಕೊಳ್ಳ ಬೇಕೆಂದು’ ಅವರು ಸಂದೇಶ ನೀಡಿದರು.
ಈ ವಾರ್ಷಿಕ ಹಬ್ಬದಲ್ಲಿ ಪಿಯುಸ್ ನಗರ್ ಇಗರ್ಜಿಯ ಧರ್ಮಗುರು ವಂ|ಆಲ್ಬರ್ಟ್ ಕ್ರಾಸ್ತಾ, ತಲ್ಲೂರು ಇಗರ್ಜಿಯ ಧರ್ಮಗುರು ವಂ|ಎಡ್ವಿನ್ ಡಿಸೋಜಾ, ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವಂ|ಅಶ್ವಿನ್ ಅರಾನ್ಹಾ ಸಹಬಲಿದಾನದಲ್ಲಿ ಭಾಗಿಯಾಗಿದ್ದರು. ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ನೀಡಿ, ಧನ್ಯವಾದಗಳನ್ನು ಅರ್ಪಿಸಿದರು. ಈ ವಾರ್ಷಿಕ ಹಬ್ಬದಲ್ಲಿ, ಹಲವಾರು ಧರ್ಮಭಗಿನಿಯರು ವಲಯದ ಭಕ್ತರು, ಸ್ಥಳೀಯ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.

ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದಂದು ವಿಧಾನ ಪರಿಷತ್ ಶಾಸಕ ಎಸ್.ಎಲ್. ಬೊಜೆಗೌಡರ ಭೇಟಿ

ಮಂಗಳೂರು:ಬಿಕರ್ನಕಟ್ಟೆಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಬಾಲಯೇಸುವಿನ ವಾರ್ಷಿಕ ಮಹೋತ್ಸವದಂದು ಕರ್ನಾಟಕ ವಿಧಾನ ಪರಿಷತ್ ಶಾಸಕಾರದ ಎಸ್.ಎಲ್ ಸನ್ಮಾನ್ಯ ಬೊಜೆಗೌಡ ರವರು ಭೇಟಿ ನೀಡಿ ಶುಭಹಾರೈಸಿದರು. ವಂದನೀಯ ಪಾ. ಚಾರ್ಲ್ಸ್ ಸೆರಾವೊ ಮತ್ತು ವಂದನೀಯ ಪಾ. ರೋವೆಲ್ ಡಿಸೋಜ ರವರು ಅವರನ್ನು ಸ್ವಾಗತಿಸಿದರು. ದ.ಕ. ಜೆ.ಡಿ.ಎಸ್ ಜಿಲ್ಲಾ ಯುವ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ಸುರತ್ಕಲ್ ಉತ್ತರ ಕ್ಷೇತ್ರದ ರತಿಷ್  ಕರ್ಕೇರಾ ಉಪಸ್ಥಿತರಿದ್ದರು.

“To Live is Christ” Book released

Manglooru: A book called  ‘To Live is Christ’ jointly authored by six scholars, namely Dr. Augustine Mulloor from Cochin, Dr. Richard D Souza and Dr. Johannes Gorantla both from Rome, Dr. Rathan Almeida from Mysore , Dr. Rudolph Raj from Mangalore and Dr. Gregory D Souza and  edited by   Rev. Dr. Gregory D Souza, was released by Rev. Dr. Pius D Souza, the Assistant to the Superior General of the Carmelite Order in the presence of Rev. Fr. George Santhumayor, the  Provincial and Rev.  Fr. Charles Serrao, the superior of St. Joseph’s Monastery.   After the holy mass at  seven p.m. Rev. Dr. Rudolph  Raj D Souza introduced the book to the public and said  that this book shows how to reach the height of holiness  after the example of the life and teaching of Jesus Christ. Dr. Pius Dsouza congratulated Dr. Gregory D Souza for bringing out this book. And recommended the same  to the people to read the  and benefit from it.

BIKARNAKATTE – THE ANNUAL FEAST OF INFANT JESUS 2023 SOLEMNIZED ON JAN 14/ಬಿಕರ್ನಕಟ್ಟೆಯ ಪುಣ್ಯಕ್ಷೇತ್ರದಲ್ಲಿ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಆಚರಣೆ

14 January:The annual feast of Infant Jesus was celebrated today at Bikarnakatte Shrine with several masses and spiritual services. There were services in Konkani, English, Kannada, and Malayalam throughout the day. Rev. Dr Deepak Valerian Tauro, Auxiliary Bishop of the Archdiocese of Delhi, presided over the solemn festal mass at 6.00 p.m.

In his homily, Rev Fr Richard Saldanha OCD emphasized the importance of choosing the right and narrow path prescribed by Jesus Christ to bring peace to the world. Kings and powerful people like Herod are working hard to bring the world to war, hatred, and despair. But the Christ who became a helpless child can rule the hearts of all who begin to offer their own precious lives to him and take the road less travelled.

This magnificent shrine is dedicated to Infant Jesus and was built in 1996, a gift from the Carmelites of Karnataka-Goa province to the diocese of Mangalore in Karnataka. However, devotion to the Infant Jesus is said to have begun around 1950. Although every Thursday is dedicated to Infant Jesus, and many faithful gather here to worship, the annual feast is celebrated on January 14th and 15th.

Rev Fr Daniel Veigas OP, Episcopal Vicar of the Diocese of Mangalore, presided over a special mass for the sick at 10.30 a.m. Throughout the day, many devotees flocked to the shrine in seeking divine blessings. Rev. Fr Gorge Santumayor, Provincial of the KG Province, Rev. Fr Charles Serrao, Superior of St Joseph’s Monastery, and other priests and deacons also officiated at the evening festal mass. Thousands of people attended the feast’s Holy Mass at 6.00 p.m., thanking Infant Jesus for blessings bestowed upon them.

ಬಿಕರ್ನಕಟ್ಟೆಯ ಪುಣ್ಯಕ್ಷೇತ್ರದಲ್ಲಿ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಆಚರಣೆ

14, ಶನಿವಾರ: ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜನವರಿ 14 ಶನಿವಾರದಂದು ವಿಜೃಂಭಣೆಯಿಂದ ನೆರವೇರಿತು.
ಪ್ರಥಮ ದಿನದ ಮಹೋತ್ಸವದಲ್ಲಿ ಅನೇಕ ಭಕ್ತಾದಿಗಳು ಪಾಲ್ಗೊಂಡು ಬಾಲ ಯೇಸುವಿನ ಕ್ರೃಪಾ ಪಾತ್ರರಾದರು. ಜನವರಿ 14ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರಿನ ಎಪಿಸ್ಕೊಪಲ್ ವಿಕಾರ್ ವಂದನೀಯ ಡೇನಿಯಲ್ ವೇಗಸ್‍ರವರ ಉಪಸ್ಥಿತಿಯಲ್ಲಿ ಹಾಗೂ ಸಂಜೆ 6 ಗಂಟೆಗೆ ದೆಹಲಿಯ ಸಹಾಯಕ ಧರ್ಮಾಧ್ಯಕ್ಷರಾದ ವಂದನೀಯ ದೀಪಕ್ ವಲೇರಿಯನ್ ತಾವ್ರೊ ನೇತೃತ್ವದಲ್ಲಿ ಮಹೋತ್ಸವದ ಸಂಭ್ರಮದ ಬಲಿಪೂಜೆಗಳು ನೆರವೇರಿದವು. ಅನೇಕ ಯಾಜಕರು, ಕನ್ಯಾಸ್ತ್ರೀಯರ ಜತೆಗೂಡಿ ಅನೇಕ ಭಕ್ತ ವಿಶ್ವಾಸಿಗಳು ಈ ಬಲಿಪೂಜೆಗಳಲ್ಲಿ ಭಾಗವಹಿಸಿದರು.
ಕಳೆದ ಒಂಬತ್ತು ದಿನಗಳ ಕಾಲ ನವೇನಾ ಪ್ರಾರ್ಥನಾವಿಧಿಗಳು ಇಲ್ಲಿ ನೆರೆದಿದ್ದು ವಿವಿಧ ಭಾಷೆಗಳಲ್ಲಿ ಬಲಿಪೂಜೆಗಳು, ಪ್ರವಚನಗಳು ನಡೆದವು. ಪ್ರತಿದಿನ ಅನ್ನ ಸಂತರ್ಪಣೆ ಏರ್ಪಡಿಸಿದ್ದು ಅನೇಕ ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತು ಪ್ರಾರ್ಥಿಸಿದರು.

Report: Carmel Kiran, MediaPics: Stany Bantwal

ಜಪ್ಪು ಕಾಸ್ಸಿಯಾ ಪ್ರೌಢ ಶಾಲೆಯ ಅಮೃತಮಹೋತ್ಸವ ಆಚರಣೆ

ಮಂಗಳೂರು: ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಅಪರಾಹ್ನ 3.30. ಕ್ಕೆ ಶಾಲಾ ಸಭಾಂಗಣದಲ್ಲಿ ನೆರವೇರಿತು. ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷರಾದ ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಗುರು ಆಂಟನಿ ಸೆರಾ, ಇವರುನವೀಕರಿಸಲ್ಪಟ್ಟ ಶಾಲಾ ಸಭಾಂಗಣವನ್ನು ಹಾಗೂಕಾರ್ಯಕ್ರಮವನ್ನು ಉದ್ಘಾಟಿಸಿ ಸೌಹಾರ್ದದ ಪ್ರತಿಕವಾದ ಈ ಶಾಲೆಯಿಂದ ಇನ್ನಷ್ಟು ಮಕ್ಕಳು ಕಲಿತು ಸಮಾಜದ ವಿವಿಧಸ್ಥಳಗಳಲ್ಲಿ ಬೆಳಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸ್ವಾಮಿ ಜಿತಕಾಮನಂದಾಜಿ ಅಧ್ಯಕ್ಷರು ಶ್ರೀರಾಮಕೃಷ್ಣ ಮಠ ಮಂಗಳೂರು ಇವರು ಎಲ್ಲರನ್ನೂ ಉದ್ದೇಶಿಸಿ ಮಾತನಾಡಿ ಆಶೀರ್ವಾದ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ .ಎಚ್ .ಆರ್ ಈಶ್ವರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ದಕ್ಷಿಣ, ಶ್ರೀ ಪ್ರೇಮಾನಂದ ಮುಖ್ಯ ಸಚೇತಕರು ಮಂಗಳೂರು ಮಹಾನಗರ ಪಾಲಿಕೆ, ಕಾರ್ಪೊರೇಟರ್ ಶ್ರೀಮತಿ ಭಾನುಮತಿ, ಹಳೆ ವಿದ್ಯಾರ್ಥಿ ಶ್ರೀ. ಟಿ. ಆರ್. ಪೂಂಜಾ, ಶ್ರೀ ಸಂತೋಷ್ ಸಿಕ್ವೇರಾ, ಶ್ರೀಅಶೋಕ್ ಫೆರ್ನಾಂಡಿಸ್ ಇವರು ಉಪಸ್ಥಿತರಿದ್ದರು.
ವಂದನೀಯ ಗುರು ಎರಿಕ್ ಕ್ರಾಸ್ತಾ ಸಂಚಾಲಕರು ಕಾಸ್ಸಿಯ ಪ್ರೌಢಶಾಲೆ ಇವರು ಸ್ವಾಗತಿಸಿದರು. ಶಾಲ ಮುಖ್ಯೋಪಾಧ್ಯರಾದ ಶ್ರೀ.ಎವರೆಸ್ಟ್ ಕ್ರಾಸ್ತಾರವರು ವಂದಿಸಿದರು. ಹಿರಿಯ ಶಿಕ್ಷಕಿ ರೀಟಾ ಪಿಂಟೋ ಕಾರ್ಯಕ್ರಮವನ್ನು ನಿರ್ವಹಿಸಿದರು.
ಮಕ್ಕಳ ಸಾಂಸ್ಕೃತಿಕಕಾರ್ಯಕ್ರಮದೊಂದಿಗೆ ಅಮೃತಮಹೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

ಭಾರತ ಸೇವಾದಳದಿಂದ ಕಾರಾಗೃಹದಲ್ಲಿ ಮನಃಪರಿವರ್ತನ ಕಾರ್ಯಾಗಾರ
ಕಾರಾಗೃಹವಾಸ ಮನಃಪರಿವರ್ತನೆಗೆ ಸದ್ಬಳಕೆಯಾಗಲಿ – ಕೆ.ಎಸ್.ಗಣೇಶ್

ಕೋಲಾರ:- ಕಾರಾಗೃಹ ವಾಸವನ್ನು ಮನಃಪರಿವರ್ತನೆಗೆ ಸದ್ಬಳಕೆ ಮಾಡಿಕೊಂಡು ಜೀವನದ ಕೆಟ್ಟ ಘಳಿಗೆಯಲ್ಲಿ ಮಾಡಿರುವ ತಪ್ಪುಗಳು ಮರುಕಳಿಸದಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗಬೇಕೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ನಗರದ ಉಪಕಾರಾಗೃಹದಲ್ಲಿ ಭಾರತ ಸೇವಾದಳವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಮನಃಪರಿವರ್ತನ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ಜೀವನದ ಕೆಟ್ಟ ಘಳಿಗೆಯಲ್ಲಿ ಮಾಡಿರುವ ತಪ್ಪುಗಳಿಂದಾಗಿ ಕಾರಾಗೃಹವಾಸ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ಆದರೆ, ಕಾರಾಗೃಹವಾಸವನ್ನು ಶಿಕ್ಷೆ ಎಂದು ಭಾವಿಸದೆ ತಮ್ಮದೇ ಮನಸ್ಸಿನೊಂದಿಗೆ ಗೆಳೆತನ ಬಯಲು ಸಿಕ್ಕ ಅಪೂರ್ವ ಅವಕಾಶ ಎಂದು ಭಾವಿಸಿ ಧ್ಯಾನ, ಯೋಗ, ಉತ್ತಮ ಪುಸ್ತಕಗಳ ಓದಿಗೆ ಅದನ್ನು ಬಳಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದು ಸಲಹೆ ನೀಡಿದರು.
ಕಾರಾಗೃಹ ವಾಸದಲ್ಲಿ ಮನಃಪರಿವರ್ತನೆಯಾಗಿ ಹೊರ ಬರುವವರಿಗೆ ಮಹಾತ್ಮಗಾಂ„ೀಜಿ ಆಶಯಗಳಡಿ ಸ್ಥಾಪಿತವಾಗಿರುವ ಭಾರತ ಸೇವಾದಳ ಸಂಸ್ಥೆಯಲ್ಲಿ ಸದಸ್ಯರಾಗಲು ಅವಕಾಶ ಕಲ್ಪಿಸಿ ಮುಖ್ಯವಾಹಿನಿಯಲ್ಲಿ ಸೇವಾ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡುವುದಾಗಿ ಅವರು ಘೋಷಿಸಿದರು.
ಭಾರತ ಸೇವಾದಳ ಹಿರಿಯ ಸದಸ್ಯ ಬಹಾದ್ದೂರ್ ಸಾಬ್ ಮಾತನಾಡಿ, ಶಾಂತಿ, ತಾಳ್ಮೆ ಮತ್ತು ಪ್ರೀತಿ ಮನುಷ್ಯನ ಮನಃಪರಿವರ್ತನೆಗೆ ಹೆಚ್ಚು ಸಹಕಾರಿಯಾಗಿರುವುದನ್ನು ಕಾರಾಗೃಹ ವಾಸಿಗಳು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸೇವಾದಳ ಹಿರಿಯ ಸದಸ್ಯ ವಿ.ಪಿ.ಸೋಮಶೇಖರ್ ಮಾತನಾಡಿ, ಜೀವನವನ್ನು ಉತ್ತಮಪಡಿಸಿಕೊಳ್ಳಲು ಅಳವಡಿಸಿಕೊಳ್ಳಬೇಕಾದ ಎಂಟು ಅಂಶಗಳನ್ನು ಕಾರಾಗೃಹವಾಸಿಗಳಿಗೆ ಮನದಟ್ಟು ಮಾಡಿಸಿ ಉತ್ತಮ ಪುಸ್ತಕಗಳನ್ನು ಕಾರಾಗೃಹದ ಗ್ರಂಥಾಲಯಕ್ಕೆ ಕೊಡುಗೆ ನೀಡುವುದಾಗಿ ಪ್ರಕಟಿಸಿದರು.
ಭಾರತ ಸೇವಾದಳ ಕೋಲಾರ ತಾಲೂಕು ಅಧ್ಯಕ್ಷ ಶ್ರೀರಾಮ್ ಮಾತನಾಡಿ, ಹತ್ತು ವರ್ಷ ಕಾರಾಗೃಹ ಶಿಕ್ಷಕರಾಗಿ ಕೆಲಸಮಾಡಿರುವ ತಮಗೆ ಇಲ್ಲಿನ ವಾಸಿಗಳ ಮನಃಸ್ಥಿತಿ ಚೆನ್ನಾಗಿ ಅರ್ಥವಾಗುತ್ತದೆ, ಸಣ್ಣ ಪುಟ್ಟ ಕಾರಣಗಳಿಗೆ ಕೋಪಗೊಳ್ಳದೆ ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ತಪ್ಪುಗಳಾಗುವುದಿಲ್ಲ ಎಂದರು.
ಕಾರಾಗೃಹದಲ್ಲಿ ಐದು ಸಾವಿರ ರೂಗಳಿಗಿಂತಲೂ ಕಡಿಮೆ ಮೊತ್ತ ಪಾವತಿಸಲಾಗದೆ ಕಾರಾಗೃಹವಾಸ ಅನುಭವಿಸುತ್ತಿರುವವರಿಗೆ ಸೇವಾದಳ ಕಡೆಯಿಂದ ಮೊತ್ತ ಪಾವತಿಸಿ ಬಿಡುಗಡೆ ಭಾಗ್ಯ ಕಲ್ಪಿಸಲಾಗುವುದು, ಈ ಕುರಿತು ಜೈಲರ್ ಮೂಲಕ ಮಾಹಿತಿ ನೀಡುವಂತೆ ಕೋರಿದರು.
ಸೇವಾದಳ ತಾಲೂಕು ಸಮಿತಿ ಸಹ ಕಾರ್ಯದರ್ಶಿ ಕೆ.ಬಿ.ರೆಡ್ಡೆಪ್ಪ್ಪ ಕಾರಾಗೃಹ ವಾಸಿಗಳು ಮತ್ತು ಅ„ಕಾರಿಗಳಿಗೆ ಸೇವಾದಳವತಿಯಿಂದ ಸಿಹಿ ವಿತರಿಸಲು ವ್ಯವಸ್ಥೆ ಮಾಡಿದ್ದರು.
ಉಪ ಕಾರಾಗೃಹ ಜೈಲರ್ ಪರಮೇಶ್ವರ ನಾಯ್ಕ್, ಉಪ ಜೈಲರ್ ಎನ್.ಡಿ.ದಾಸರ್, ಮುಖ್ಯ ವೀಕ್ಷಕ ಮಹಾದೇವ್, ಸೇವಾದಳ ಬಂಧುಗಳಾದ ಶ್ರೀನಿವಾಸಮೂರ್ತಿ, ರಾಜೇಶ್‍ಸಿಂಗ್ ಉಪಸ್ಥಿತರಿದ್ದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರೂಪಿಸಿದರು. ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.