ಜನ ಔಷಧಿ ದವಸದ ಐದನೇ ದಿನ ಲಯನ್ಸ್ ಕ್ಲಬ್ ತಲ್ಲೂರು ಹಾಗೂ ಗೆಳೆಯರ ಬಳಗ ಕರ್ಕಿ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ

ಜನ ಔಷಧಿ ದವಸದ ಐದನೇ ದಿನ ದಂದು ಲಯನ್ಸ್ ಕ್ಲಬ್ ತಲ್ಲೂರು ಹಾಗೂ ಗೆಳೆಯರ ಬಳಗ ಕರ್ಕಿ ಇವರ ಸಹಯೋಗದೊಂದಿಗೆ ಕರ್ಕಿ ಪ್ರಾಥಮಿಕ ಶಾಲೆ ಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಆಯೋಜಿಸಲಾಯಿತು. ಇದರ ಅಧ್ಯಕ್ಷತೆಯನ್ನು ಲಯನ್ಸ್ ತಲ್ಲೂರು ಇದರ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ರಕ್ತ ದಾನದ ಮಹತ್ವ ವನ್ನು ತಿಳಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಮುತ್ತಯ್ಯ ಶೆಟ್ಟಿ, ಸದಾನಂದ ಶೆಟ್ಟಿ , ಲಯನ್ ನಾರಾಯಣ ಶೆಟ್ಟಿ (ಖಜಾಂಚಿ) ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಸುದೇಶ್ ಶೆಟ್ಟಿ, ಲಯನ್ ಕುಸುಮಾಕರ ಶೆಟ್ಟಿ, ಲಯನ್ ರವಿ ದೇವಾಡಿಗ ಅಲ್ಲದೇ ಲಯನ್ಸ್ ನಿತರ ಪದಾಧಿಕಾರಿಗಳು ಮತ್ತು ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು. ಲಯನ್ಸ್ ಕಾರ್ಯದರ್ಶಿ ಪ್ರತಾಪ್ ವಂದಿಸಿದರು ಲಯನ್ ಸುಂದರ ಕಾರ್ಯಕ್ರಮ ನಿರೂಪಿಸಿದರು. 58 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು

ಶ್ರೀನಿವಾಸಪುರ 1 : ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ದಲಿತ ಹಿರಿಯ ಮುಖಂಡ ಮುನಿಸ್ವಾಮಿ ತಿಳಿಸಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಕಚೇರಿ ಆವರಣದಲ್ಲಿ ಶನಿವಾರ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ಅಭಿನಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. .
ಮಾರ್ಚ್ 6 ರ ಸೋಮವಾರದೊಂದು ಬೆ11;30 ಕ್ಕೆ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರನ್ನ ಮುಳಬಾಗಿಲು ವೃತ್ತದಿಂದ ಪುಷ್ಪಪಲ್ಲಕಿಯಲ್ಲಿ ಗೌರವಯುತವಾಗಿ ಎಂಜಿ ರಸ್ತೆಯ ಮೂಲಕ ತಾಲೂಕು ಕಚೇರಿ ಆವರಣದ ವರೆಗೂ ಕರೆತಂದು, ಈ ಸಭೆಯು ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಶಾಸಕರು ಪದ್ಮಶ್ರೀ ಪುರಸ್ಕøತರಾದ ಮುನಿವೆಂಕಟಪ್ಪ ರವರನ್ನ ಅಭಿನಂದಿಸಲಾಗುವುದು ಎಂದು ಮಾಹಿತಿ ನೀಡಿದರು .
ಪಿಎಲ್‍ಡಿ ಬ್ಯಾಂಕ್ ತಾಲೂಕು ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ ಒಂದು ಕಾಲದಲ್ಲಿ ತಮಟೆ ವಾದ್ಯವು ಉದಾಸೀನವಿತ್ತು . ಆದರೆ ಮುನಿವೆಂಕಟಪ್ಪ ರವರು ತಮಟೆ ವಾದ್ಯದಲ್ಲಿ ಪ್ರಾವೀಣ್ಯತೆ ಹೊಂದಿರುವ ಇವರು ದೇಶ, ವಿದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ ಪ್ರಖ್ಯಾತರಾಗಿ , ವಿವಿಧ ರೀತಿಯ ಪುರಸ್ಕಾರವನ್ನು ಪಡೆದಿರುವ ಅದ್ಭುತ ಕಲಾವಿದನಿಗೆ ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ನೀಡಿ ಗೌರವಿಸಲಾಗಿದೆ. ಇಂತಹ ಅದ್ಭುತ ಕಲಾವಿದನಿಗೆ ಜ್ಯಾತೀತವಾಗಿ, ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಪಾಲ್ಗುಂಡು ಕಲಾವಿದನಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿ.ಪಂ.ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರು ವಿಶೇಷವಾಗಿ ತಾಲೂಕಿನ ಅಳಿಯರಾಗಿರುವ ಇವರು , ಇವರಿಂದ ತಾಲೂಕಿಗೆ ಒಂದು ರೀತಿಯಲ್ಲಿ ಗೌರವ ಸಿಕ್ಕ ಹಾಗೆ . ತಾಲೂಕಿನ ಕಲಾಭಿಮಾನಿಗಳು ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಬೇಕು. ಈ ಒಂದು ಕಾರ್ಯಕ್ರಮವು ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಬೇಕು ಎಂದರು.
ತಾಲೂಕಿನ ಕಲಾವಿದರು, ಕವಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಕಲಾಭಿಮಾನಿಗಳು, ಕನ್ನಡಪರ , ರೈತಪರ ಸಂಘಟನೆಗಳು, ಅಲ್ಪಸಂಖ್ಯಾತರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಉಪ್ಪರಪಲ್ಲಿ ತಿಮಯ್ಯ , ಕೆ.ಕೆ.ಮಂಜುನಾಥ್, ರಾಮಾಂಜನಮ್ಮ, ವಾಸು, ಬಂದರ್ಲಾಪಲ್ಲಿ ಮುನಿಯಪ್ಪ, ಚಲ್ದಿಗಾನಹಳ್ಳಿ ಗ್ರಾಮದ ಮುನಿವೆಂಕಟಪ್ಪ, ವೆಂಕಟೇಶ್, ರಾಮಕೃಷ್ಣ, ಶ್ರೀನಿವಾಸರೆಡ್ಡಿ, ಕೃಷ್ಣಾರೆಡ್ಡಿ, ನರಸಿಂಹ ಇದ್ದರು.

ಸಣ್ಣ ಪುಟ್ಟ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ- ಅರಣ್ಯ ಇಲಾಖೆಯ ವಿರುದ್ಧ ವೀರಭದ್ರಸ್ವಾಮಿ ಆಕ್ರೋಶ

ಶ್ರೀನಿವಾಸಪುರ 2 : ಸಣ್ಣ ಪುಟ್ಟ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಮುಖಂಡ ಕಾರ್ಯದರ್ಶಿ ವೀರಭದ್ರಸ್ವಾಮಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಧರಣಿ ನಡೆಸಿ ಪ್ರತಿಭಟಿಸಿ ಮಾತನಾಡಿದರು.
ಐವತ್ತು ಆರವತ್ತು ವರ್ಷಗಳ ಹಿಂದೆ ಖರೀದಿ ಮಾಡಿ ಸಾಗುವಳಿ ಮಾಡುತ್ತಿರುವ ಸಣ್ಣ ಪುಟ್ಟ ರೈತರ ಜಮೀನಗಳನ್ನು ಪದೇ ಪದೇ ಸೆಟಲೈಟ್ ಸರ್ವೆ ನೆಪದಲ್ಲಿ ಗುರುತು ಹಾಕಿ ಅರ್ಧ ಎಕರೆ ಮುಕ್ಕಾಲು ಎಕರೆ ಬಿಡಬೇಕು ಎಂದು ತೊಂದರೆ ನೀಡುತ್ತಾರೆ ಎಂದು ಆರೋಪಿಸಿದರು.
ರೈತ ಸಂಘ ಹಾಗು ಹಸಿರು ಸೇನೆ ತಾಲೂಕು ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ಮಾತನಾಡಿ ದಶಕಗಳ ಹಿಂದೆಯೆ ಅರಣ್ಯ ಇಲಾಖೆ ತಮ್ಮ ಅರಣ್ಯ ಭೂಮಿಯನ್ನು ಗಡಿ ಗುರುತು ಮಾಡಿ ಕಲ್ಲು ನೆಟ್ಟಿದ್ದರು. ಈಗ ಮತ್ತೆ ಹೊಸದಾಗಿ ಸೆಟಲೈಟ್ ಸರ್ವೆ ಹೆಸರಿನಲ್ಲಿ ಕಿರುಕಳ ನೀಡುತ್ತಿದ್ದಾರೆ ಎಂದರು. ಸರ್ವೆ ಮಾಡುವುದಾದರೆ ಕಂದಾಯ ಇಲಾಖೆ, ಅರಣ್ಯ ಇಲಾಖೆ ಜೊತೆಯಲ್ಲಿ ಸರ್ವೆ ಮಾಡಲಿ ಎಂದರು.
ಇತ್ತೀಚಿಗೆ ನವಿಲು, ಜಿಂಕೆಗಳು ಮುಂತಾದ ಕಾಡು ಪ್ರಾಣಿಗಳಿಂದ ಉಪಟಳಗಳಿಂದ ರೈತರು ನಷ್ಟಕ್ಕೆ ಒಳಗಾಗಿರುವ ಬಗ್ಗೆ ಅರಣ್ಯ ಇಲಾಖೆಯವರು ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದರು.
ರೈತ ಸಂಘದ ಪ್ರತಿಭಟನೆ ಮಾಹಿತಿ ಇದ್ದರೂ ಸಹ ಅರಣ್ಯ ಇಲಾಖೆ ಕಚೇರಿಯಲ್ಲಿ ರೈತರ ಅಹವಾಲು ಸ್ವೀಕರಿಸಲು ಅಧಿಕಾರಿಗಳು ಇಲ್ಲದೆ ರೈತರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ಧ ಅಕ್ರೋಶಗೊಂಡ ರೈತರು ತಾಲೂಕು ಕಚೇರಿ ಮುಂಭಾಗದಲ್ಲಿನ ಮುಖ್ಯರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ತಾಲೂಕು ಉಪತಹಶೀಲ್ದಾರ್ ಜಯಾರಾಮ್, ಶಿರಸ್ತೆದಾರ್ ಮನೋರ್‍ಮಾನೆ, ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಿ ರೈತರ ಮನವೊಲಿಸಿ ಅವರಿಂದ ಅಹವಾಲು ಸ್ವೀಕರಿಸಿ , ಮುಂದಿನ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಮೌಲ, ಗಂಗಾಧರ್, ರಾಮೇಗೌಡ, ವಿನೋದ್ ,ರಮೇಶ್ ಈರಪ್ಪರೆಡ್ಡಿ, ಶ್ರೀಧರ್ ಇದ್ದರು.

ಕುಂದಾಪುರ ರೋಜರಿ ಚರ್ಚನಲ್ಲಿ ಕ್ರೈಸ್ತ (ನೀತಿ)ಶಿಕ್ಷಣ ದಿನಾಚರಣೆ

ಕುಂದಾಪುರ ಮಾ.5: ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಭಾಭವನದಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಮಾ 5 ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ನೀತಿ ಶಿಕ್ಷಣ ಪಡೆದ ಮಕ್ಕಳು ಮತ್ತು ಪಡೆಯದ ಮಕ್ಕಳ ವರ್ತನೆಯಲ್ಲಿ ವತ್ಯಾಸ ಇರುತ್ತದೆ. ನೀತಿ ಶಿಕ್ಷಣ ಪಡೆದ ಮಕ್ಕಳಲ್ಲಿ ನಯವಿನಯಗಳು ಕಾಣುತ್ತವೆ. ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಅವರಲ್ಲಿ ತುಂಬಿರುತ್ತೆ., ಅವರಲ್ಲಿ ದೇವ ಭಕ್ತಿ, ವಿನಮ್ರತೆ ಎದ್ದು ಕಾಣುತ್ತದೆ, ಗುರುಗಳು ಹಿರಿಯರೆಂದರೆ ಅವರಿಗೆ ಗೌರವ. ಅವರ ನಡೆ ನುಡಿ ಉತ್ತಮವಾಗಿರುತ್ತದೆ. ಯಾಕೆಂದರೆ ಇಲ್ಲಿ ಉತ್ತಮ ನೀತಿ ಶಿಕ್ಷಣ ನೀಡುವ ಶಿಕ್ಷಕರು, ಸಿಸ್ಟರ್‍ಗಳು ಉತ್ತಮ ನೀತಿ ಶಿಕ್ಷಣ ನೀಡುತ್ತಾರೆ, ನಮ್ಮ ಚರ್ಚಿನಲ್ಲಿ ಹೆಚ್ಚಿನ ಮಕ್ಕಳು ನೀತಿ ಶಿಕ್ಷಣಕ್ಕೆ ಹಾಜರಾಗುವುದು ತಂಬ ಸಂತೋಷದ ಸಂಗತಿ. ಮಕ್ಕಳ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಪ್ರೀತಿಯಿಂದ ಪೂಜೆ ಮತ್ತು ನೀತಿ ಶಿಕ್ಷಣಕ್ಕೆ ಕರೆ ತರುತ್ತಾರೆ,ನೀತಿ ಶಿಕ್ಷಣ ನೀಡುವ ಶಿಕ್ಷಕರ ತ್ಯಾಗ ದೊಡ್ಡದು. ಅವರು ರಜಾ ದಿನದಲ್ಲಿ ತಮ್ಮ ಸಮಯವನ್ನು ತ್ಯಾಗ ಮಾಡಿ ವರ್ಷವೀಡಿ ನೀತಿ ಶಿಕ್ಷಣ ನೀಡುತ್ತಾ ಬರುತ್ತಾರೆ, ಹಾಗಾಗಿ ಶಿಕ್ಷಕರು ಮತ್ತು ತಂದೆ ತಾಯಿಗಳು ಅಭಿನಂದನಾರ್ಹರು ಎಂದು ತಮ್ಮ ಸಂದೇಶದಲ್ಲಿ ತಿಳಿಸಿ ಅವರು ಶಿಕ್ಷಕರಿಗೆ ನೆನಪಿನ ಕಾಣಿಕೆಯನ್ನು ನೀಡಿದರು,
ಸಭಾ ಕಾರ್ಯ ಕ್ರಮದ ಮೊದಲು ಸಹಾಯಕ ಧರ್ಮಗುರು ವಂ|ಅಶ್ವಿನ್ ಅರಾನ್ಹಾ ಹೋಲಿ ರೋಜರಿ ಚರ್ಚನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ, ಸಭಾ ಕಾರ್ಯಕ್ರಮದಲ್ಲಿ ನೀತಿ ಶಿಕ್ಷಣದಲ್ಲಿ ಸಾಧನೆ ಮಾಡಿದವರಿಗೆ ಬಹುಮಾನವನ್ನು ವಿತರಣೆ ಮಾಡಿದರು. ಕಾರ್ಯಕ್ರಮದ ಅತಿಥಿಯಾಗಿದ್ದ ಶಿಕ್ಷಕಿ ಫಾತಿಮಾ ವಾಜ್ ಶುಭ ಹಾರೈಸಿ ಬಹುಮಾನ ವಿತರಣೆ ಮಾಡಿದರು. ಜೊತೆಗೆ ಪಾಲನಾ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ನೀತಿ ಶಿಕ್ಷಣದ ಬಗ್ಗೆ ಶಿಕ್ಷಕರ ಪರವಾಗಿ ಸಿಸ್ಟರ್ ಸುನೀತಾ ವಿದ್ಯಾರ್ಥಿಗಳ ಪರವಾಗಿ ವಿಯೊನ್ನಾ ಡಿಸೋಜಾ ತಮ್ಮ ಅನುಭವವನ್ನು ಹಂಚಿಕೊಂಡರು.
ಮಕ್ಕಳಿಂದ ನ್ರತ್ಯ, ಪ್ರಹಸನ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ನೀತಿ ಶಿಕ್ಷಣ ಶಿಕ್ಷರ ಸಂಚಾಲಕಿ ವೀಣಾ ಡಿಸೋಜಾ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಹ್ಯಾವಿನ್ ಕೋತಾ ಮತ್ತು ಡೆನ್ಸಿಯಾ ಬರೆಟ್ಟೊ ನಿರೂಪಿಸಿದರು. ವಿದ್ಯಾರ್ಥಿನಿ ಲತಿಕಾ ಡಿಸೋಜಾ ಸ್ವಾಗತಿಸಿದಳು. ಶಿಕ್ಷಕಿ ಪ್ರೀತಿ ಬ್ರಗಾಂಜಾ ವಂದಿಸಿದರು.

ಮಂಗಳೂರು : ಕಸ ಸ್ವಚ್ಛತೆ ಮಾಡಿ ಚರಂಡಿ ಬಳಿ ರಾಶಿ ಹಾಕುವುದು ಅದನ್ನು ವಿಲೇವಾರಿ ಮಾಡದೆ, ಪುನ ಕಸ ಚರಂಡಿಗೆ ಸೇರುತ್ತದೆ

ಮಂಗಳೂರು ಪ್ರದೇಶದಲ್ಲಿ ಸ್ವಚ್ಛತೆ ಯಾವ ಪ್ರಯೋಜನವಿಲ್ಲ ಮಂಗಳೂರು ಮಹಾನಗರ ಪಾಲಿಕೆಯ 34 ವಾರ್ಡ್ ನಲ್ಲಿ ರಸ್ತೆ ಬದಿಯಲ್ಲಿ ಕಸ ವನ್ನು ಮತ್ತು ಚರಂಡಿ ಗ ಸ್ವಚ್ಛತೆ ಮಾಡಿ ಕಸದ ರಾಶಿಯನ್ನು ಅಲ್ಲೆ ರಸ್ತೆಯಲ್ಲಿ ಬಿಟ್ಟು ಹೋಗುವುದು, ಅದೇ ಕಸ ಚರಂಡಿ ಗಳಲ್ಲಿ ಪುನಃ ನಿಂತು ಕಸ ನಿಲ್ಲುತ್ತದೆ. ಈ ರೀತಿ ಸ್ವಚ್ಛತ ಕಾರ್ಯ ಮಾಡಿ ಪ್ರಯೋಜನವಿಲ್ಲ. ಪಾಲಿಕೆ ಯವರು ಇದನ್ನು ಗಮನಿಸಬೇಕು. ವಾರ್ಡ್ ಸಂಖ್ಯೆ 34 ಜಯಶ್ರೀ ಗೇಟ್ ಬಳಿ ಕೆಲವು ದಿನಗಳಿಂದ ಕಸವನ್ನು ಹೀಗೆ ರಾಶಿ ರಾಶಿ ಹಾಕಿ, ಅದು ಚರಂಡಿಗೆ ಸರಿದು ಚರಂಡಿ ಕಸದಿಂದ ತುಂಬಿದೆಯೆಂದು ವಾರ್ಡಿನವರು ಮಾದ್ಯಮದ ಗಮನೆ

ಕುಂದಾಪುರ : ಜನ ಔಷಧಿ ದಿವಸದ ಅಂಗವಾಗಿ ಮೂರನೇ ದಿನ ಭಾರತೀಯ ರೆಡ್ ಕ್ರಾಸ್ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದರು

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯಿಂದ ಜನ ಔಷಧಿ ದಿವಸದ ಅಂಗವಾಗಿ ಮೂರನೇ ದಿನ ರೆಡ್ ಕ್ರಾಸ್ ಸದಸ್ಯರು ಪ್ರತಿಜ್ಞೆಯನ್ನು ಸ್ವೀಕರಿಸಿದರು. ಇಂದು ನಾಲ್ಕನೇ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜಿಸಲಾಯಿತು. ಶಿಭಿರದಲ್ಲಿ ಮಧುಮೇಹ, ರಕ್ತದೊತ್ತಡ ಮತ್ತು ಅಗತ್ಯ ಇರುವವರಿಗೆ ಇ. ಸಿ. ಜಿ. ಮಾಡಲಾಯಿತು. ಆಯ್ದ ನಾಲ್ಕು ಮಂದಿ ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಪೆನ್ನನ್ನು ನೀಡಲಾಯಿತು. ಕಾರ್ಯಕ್ರಮ ವನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಜಯಕರ ಶೆಟ್ಟಿ ಉದ್ಘಾಟಿಸಿದರು.

ಕಾರ್ಯಕ್ರಮ ದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಪದಾಧಿಕಾರಿಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಸದಾನಂದ ಶೆಟ್ಟಿ, ಬಿ.ಎಮ್. ಚಂದ್ರಶೇಖರ, ವೀರೇಂದ್ರ ಕುಮಾರ್, ಸ್ಮಿತಾ ಮತ್ತು ಸಿಭಂದಿಗಳು ಉಪಸ್ಥಿತರಿದ್ದರು. 203 ಜನರ ಆರೋಗ್ಯ ತಪಾಸಣೆ ಮತ್ತು ಐದು ಜನರ ಇ.ಸಿ.ಜಿ ಮಾಡಲಾಯಿತು

ಆರ್‍ಎಲ್ ಜಾಲಪ್ಪ ಆಸ್ಪತ್ರೆ ಕೋಲಾರದಲ್ಲಿ ಟೋಟಲ್ ಟಿ.ಎಂ.ಜೆ ರೀಪ್ಲೇಸ್ಮೆಂಟ್

ಕೋಲಾರ,ಮಾ.3: ಮುಖದಲ್ಲಿ ಚಲಿಸುವ ಏಕೈಕ ಮೂಳೆ ಕೆಳದವಡೆ. ಕೆಳದವಡೆ ಮತ್ತು ತಲೆ ಬುರುಡೆಯ ಜಂಟಿ Temporomandibular joint (TMJ) ತಲೆ ಬುರುಡೆಯ ಫೋಸಾದಲ್ಲಿ ಸರಿಯುವುದರಿಂದ ಕೆಳದವಡೆಯ ಚಲನೆ ಸಾದ್ಯವಾಗುತ್ತದೆ. ಕೆಳದವಡೆಗೆ ಪೆಟ್ಟುಬಿದ್ದು, ಜಂಟಿ ಸುತ್ತ ರಕ್ತಸ್ರಾವವಾಗಿ ಕ್ರಮೇಣ ತಲೆ ಬುರುಡೆ ಜೊತೆ ಸೇರಿ ಒಂದೇ ಮೂಳೆಯಾಗಿ ದವಡೆಯ ಚಲನೆಯನ್ನು ನಿಬರ್ಂಧಿಸುವುದನ್ನು ಖಿಒಎ ಂಟಿಞಥಿಟosis (ಟಿ.ಎಂ.ಜೆ.ಆಂಕಾಲಸೀಸ್) ಎಂದು ಕೆರಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಯಿ ತೆಗೆಯುವುದು ಮತ್ತು ಆಹಾರ ಸೇವನೆಯಲ್ಲಿ ತೊಡುಕು ಕಂಡುಬರುತ್ತದೆ.
ಆರ್‍ಎಲ್ ಜಾಲಪ್ಪ ಆಸ್ಪತ್ರೆಯದಂತ ವೈದ್ಯಕೀಯ ವಿಭಾಗದಲ್ಲಿ ಇಂತಹ ತೊಂದರೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ಅಖಿಲಳಿಗೆ (ಹೆಸರು ಬದಲಾಯಿಸಲಾಗಿದೆ) ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಅಖಿಲ 3 ವರ್ಷದ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಕೆಳದವಡೆ ಮತ್ತು ಕಾಲಿಗೆ ಪೆಟ್ಟುತಗುಲಿತ್ತು. ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದ ಹುಡುಗಿಯ ಕೆಳದವಡೆಯ ಪೆಟ್ಟನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಾಯಿ ತೆಗೆಯುವುದು ದಿನದಿಂದ ದಿನಕ್ಕೆ ಕಡಿಮೆಯಾಗಿ ಕೆಲ ವರ್ಷಗಳಿಂದ ಸಂಪೂರ್ಣವಾಗಿ ಬಂದ್ ಆಗಿತ್ತು.
ದಂತ ವಿಭಾಗದ ಮುಖ್ಯಸ್ಥೆ ಡಾ|| ದೀಪಿಕ ಕೆಂಕೆರೆ ಮತ್ತು ಅವರ ತಂಡದ ಡಾ||ಮಲ್ಲಿಕಾ ಪಿ.ರೆಡ್ಡಿ ಹಾಗೂ ಡಾ||ಹರ್ಷಿತ ಕೆ.ಆರ್, ತಲೆ ಬುರುಡೆಯ ಜೊತೆಕೂಡಿಕೊಂಡಿದ್ದ ಕೆಳದವಡೆಯ ಜಂಟಿಯನ್ನು ಬಿಡಿಸಿ ದವಡೆಯ ಚಲನೆಗೆ ಪೂರಕವಾಗಲು, ಭೋಪಾಲ್ ಮಧ್ಯ ಪ್ರದೇಶದಲ್ಲಿ ತಯಾರಿಸಿದ ಕೃತಕ ಜಂಟಿಯನ್ನು ಅಳವಡಿಸಲಾಗಿದೆ. ಅರವಳಿಕೆ ವಿಭಾಗದ ಮುಖ್ಯಸ್ಥ ಡಾ||ರವಿ.ಎಂ ಮತ್ತು ಅವರ ತಂಡದ ಡಾ|| ಸುಜಾತ.ಎಂ.ಪಿ ಯಶಸ್ವಿಯಾಗಿ ಅರವಳಿಕೆಯನ್ನು ನೀಡಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಕೆಳದವಡೆಯ ಚಲನೆ ಪುನ: ಸ್ಥಾಪನೆಯಾಗಿದೆ. ಹಲವಾರು ವರ್ಷಗಳ ನಂತರ ಅಖಿಲಳಿಗೆ ಸಾಮಾನ್ಯ ಆಹಾರವನ್ನು ಸೇವಿಸಲು ಸಾಧ್ಯವಾಗಿದೆ. ಶಸ್ತ್ರಚಿಕಿತ್ಸೆಯ 6 ತಿಂಗಳುವರೆಗೂ ಬಿಡಿಸಿದ ಮೂಳೆ ಜಂಟಿತಲೆ ಬುರುಡೆಯ ಜೊತೆ ಮರುಜೋಡಣೆಯ ಅತಂಕವಿರುವುದರಿಂದ ಬಾಯಿ ತೆಗೆಯುವ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ.
ಆರ್‍ಎಲ್ ಜಾಲಪ್ಪಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿ ಟೋಟಲ್ ಜಾಯಿಂಟ್ ರೀಪ್ಲೇಸ್ಮೆಂಟ್(ಖಿಎಖ) ಮಾಡಲಾಗಿದೆ.ಈ ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿ ನಡೆಯದಿರಲು ಕಾರಣ, ಪರಿಣಿತ ಶಸ್ತ್ರಚಿಕಿತ್ಸಕರ ಅಲಭ್ಯತೆ ಮತ್ತು ಕೃತಕ ಜಂಟಿಗೆ ತಗಲುವ ವೆಚ್ಚ.
ಅಖಿಲಳ ಶಸ್ತ್ರಚಿಕಿತ್ಸೆಗೆ ಪೂರಕವಾದ ಎಲ್ಲಾ ವಿಧಿಗಳನ್ನು ಪೂರೈಸುವುದರಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಮಕ್ಕಳ ವಿಭಾಗದ ಕೊಡುಗೆ ಅಪಾರ.

ಶ್ರೀನಿವಾಸಪುರ:ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿನ ಅಂಗಡಿ ಮಳಿಗೆಗಳನ್ನು ಬಹಿರಂಗ ಹರಾಜಿನ ಮೂಲಕ ರೂ.46.63 ಲಕ್ಷಕ್ಕೆ ನೀಡಲಾಯಿತು

ಶ್ರೀನಿವಾಸಪುರ: ಪಟ್ಟಣದ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿನ 11 ಅಂಗಡಿ ಮಳಿಗೆಗಳನ್ನು ಗುರುವಾರ ಬಹಿರಂಗ ಹರಾಜಿನ ಮೂಲಕ ರೂ.46.63 ಲಕ್ಷಕ್ಕೆ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹರಾಜಿನ ಬಳಿಕ ಮಾತನಾಡಿ, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಖಾಲಿಯಿದ್ದ 11 ಅಂಗಡಿಗಳ ಬಹಿರಂಗ ಹರಾಜು ನಡೆಸಲಾಗಿದೆ. ಹರಾಜಿನಲ್ಲಿ ಅಂಗಡಿ ಪಡೆದುಕೊಂಡಿರುವ ವ್ಯಕ್ತಿಗಳು, ಅಂಗಡಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಹೇಳಿದರು.
ಅಂಗಡಿ ಮಳಿಗೆ ಬಾಡಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಸಂದಾಯ ಮಾಡಬೇಕು. ಪುರರಸಭೆ ಗಮನಕ್ಕೆ ತರದೆ ಅಂಗಡಿ ಮಳಿಗೆಗಳನ್ನು ಬೇರೆಯರಿಗೆ ವರ್ಗಾಯಿಸಬಾರದು. ಪುರಸಭೆ ನಿಯಮಗಳಿಗೆ ಒಳಪಟ್ಟು ವ್ಯವಹರಿಸಬೇಕು. ಮಳಿಗೆಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯರಾದ ಬಿ.ವೆಂಕಟರೆಡ್ಡಿ, ಸಂಜಯ್‍ಸಿಂಗ್, ಎನ್‍ಎಂಆರ್ ನಾಗರಾಜ್, ಜಯಣ್ಣ, ರಾಮಾಂಜಿ, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್

ಮಂಗಳೂರಿನ ಡಾ। ಪಿ.ಪಿ. ದೇವನ್‌ ಅವರಿಗೆ “ಗೋಲ್ಡನ್‌ ಏಮ್‌’ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಎಜೆ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಡಾ| ಪಿ.ಪಿ. ದೇವನ್‌ ಅವರಿಗೆ ಪ್ರತಿಷ್ಠಿತ
“ಗೋಲ್ಡನ್‌ ಏಮ್‌’ ಪ್ರಶಸ್ತಿ ಲಭಿಸಿದೆ. 11ನೇ ಆವೃತ್ತಿಯ ಗೋಲ್ಡನ್‌ ಏಮ್‌ ಸಮ್ಮೇಳನವನ್ನು ಬೆ೦ಗಳೂರಿನ ಡೈನರ್ಜಿಕ್‌ ಬಿಸಿನೆಸ್‌ ಸೊಲ್ಯೂಷನ್ಸ್‌ ಆಯೋಜಿಸಿತ್ತು. ಈ ಸ೦ದರ್ಭದಲ್ಲಿ, ಸುಮಾರು ಒಂದು ದಶಕದ ಕಾಲ ಇಎನ್‌ಟಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಪಿ.ಪಿ. ದೇವನ್‌ ಅವರಿಗೆ “ಅತ್ಯಂತ ವಿಶ್ವಾಸಾರ್ಹ ಹೆಲ್ಫ್‌ಕೇರ್‌ ಲೀಡರ್‌ಶಿಪ್‌ – ಶ್ರೇಷ್ಟ ಇಎನ್‌ಟ ಸ್ಪೆಷಲಿಸ್ಟ್‌ ಎಂಬ ಗೌರವ ಪ್ರದಾನ ನೀಡಲಾಯಿತು.