ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಶ್ವ ಮಹಿಳಾ ದಿನಾಚರಣೆ, ಸನ್ಮಾನ

ಸಮಾಜದಲ್ಲಿ ಪುರುಷರಷ್ಟೇ ಸ್ತ್ರೀ ಕೂಡ ಸಮಾನಳಾಗಿದ್ದು ಹೆಣ್ಣು ಈ ಸಮಾಜದ ಕಣ್ಣಾಗಿದ್ದಾಳೆ. ಹೆಣ್ಣು ಇವತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸಾಧನೆಯನ್ನು ಮಾಡುತ್ತಿದ್ದಾಳೆ ಎಂದು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಹೇಳಿದರು.
ಅವರು ಬುಧವಾರ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ವತಿಯಿಂದ ಜರಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಜ ಹೆರಿಗೆ ಎಂಬುದ ವೈದ್ಯಕೀಯ ಲೋಕಕ್ಕೆ ಸವಾಗಿರುವ ಇಂದಿನ ಕಾಲದಲ್ಲಿ ಸುಮಾರು 25 ವರ್ಷಗಳ ಹಿಂದೆಯೇ ಇನ್ನೂರಕ್ಕೂ ಅಧಿಕ ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಿರುವ ಬೋಳ ಕೊಳಜಾಲು ಅಪ್ಪಿ ಪೂಜಾರ್ತಿ ಅವರಿಗರ ವಿಶ್ವ ಮಹಿಳಾ ದಿನದ ಅಂಗವಾಗಿ ಮನೆಗೆ ತೆರಳಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಉದಯ ಅಂಚನ್, ಪೂರ್ವಾಧ್ಯಕ್ಷ ಸತೀಶ್ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಸತೀಶ್, ಕಾರ್ಯದರ್ಶಿ ಲಲಿತಾ ಆಚಾರ್ಯ, ಉಫಾಧ್ಯಕ್ಷೆ ಲೀಲಾ ಪೂಜಾರಿ ಸದಸ್ಯರಾದ ಸುರೇಶ್ ಅಬ್ಬನಡ್ಕ, ಸಂಧ್ಯಾ ಶೆಟ್ಟಿ, ವೀಣಾ ಪೂಜಾರಿ, ಪುಷ್ಪ ಕುಲಾಲ್, ಹರಿಣಿ ಪೂಜಾರಿ ಮೊದಲಾದವರಿದ್ದರು.  

ಮಂಗಳೂರು : ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ 2023


ಮಂಗಳೂರು: ದಿನಾಂಕ 8.03.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದುರೂ ಮಂಗಳೂರು ಹಾಗೂ ಅರೈಝ್ ಪೌಂಡೇಶನ್ , ಸಹೋದಯ ಬೆಥನಿ ಮಹಿಳಾ ಒಕ್ಕೂಟ, ಮಂಗಳೂರು ವಿಶ್ವ ವಿದ್ಯಾನಿಲಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರ ಜಂಟಿ ಆಶ್ರಯದಲ್ಲಿ ಪುಷ್ಪಾಲಯ ಸಂಭಾಗಣದಲ್ಲಿ ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ ಎಂಬ ವಿಷಯವನ್ನಾಧರಿಸಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರ್ಥನಾ ನೃತ್ಯದ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಭ| ಸಂತೋಷ್ ಮರಿಯಾ ಬಿ.ಎಸ್ ಮಹಾಮಾತೆಯ ಸಲಹೆದಾರರು/ ಬೆಥನಿ ಸಮಾಜ ಸೇವಾ ಪ್ರತಿಷ್ಠಾನದ ಸದಸ್ಯೆಯಾದ ಇವರು ಈಗಿನ ತಾಂತ್ರಿಕ ಯುಗದಲ್ಲಿ ಮಹಿಳೆಯರು, ಹುಡುಗಿಯರು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳ ಜಾಗತಿಕ ಸಬಲೀಕರಣಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತಿದೆ. ತಾಂತ್ರಿಕ ಯುಗವು ಎಲ್ಲಾ ರೀತಿಯ ಅಸಮಾನತೆ ಮತ್ತು ಅದನ್ನು ತೊಡೆದು ಹಾಕಲು ಅಭೂತಪೂರ್ಣ ಅವಕಾಶವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಯಾವುದೇ ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಸಮಾನರೆಂಬ ಭಾವನೆ ಎಲ್ಲರಲ್ಲೂ ಮೂಡಬೇಕೆಂದು ತಿಳಿಸುತ್ತಾ ತಮ್ಮ ಉತ್ತಮ ಸಂದೇಶವನ್ನು ನೀಡಿ ಮಹಿಳೆಯರನ್ನು ಹುರಿದುಂಬಿಸಿ ಶುಭ ಹಾರೈಸಿದರು. ತದನಂತರ ಶ್ರೀ ಶಶಿಧರ್ ಪಟ್‍ಗಾರ್ ಇವರು ಈ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸೈಬರ್ ಕ್ರೈಂ ಎಂದರೇನು? ಇದರಿಂದ ಮಹಿಳೆಯರು ಯಾವೆಲ್ಲ ರೀತಿಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ, ಸಮಾಜಿಕ ಜಾಲತಾಣದಿಂದಾಗುವ ಉಪಯೋಗ ಮತ್ತು ದುರುಪಯೋಗÀ, ಇದರಿಂದ ಯಾವ ರೀತಿಯಲ್ಲಿ ಜಾಗೃತಿ ಹೊಂದಬೇಕೆಂಬುದರ ಕುರಿತಾಗಿ ಮಾಹಿತಿ ನೀಡಿದರು. ನಂತರ ಸಹೋದಯ ಕಲಿಕಾ ಸಾಮಥ್ರ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ನಗದು ಹಾಗೂ ಪ್ರಮಾಣ ಪತ್ರ ನೀಡಲಾಯಿತು ಅದರೊಂದಿಗೆ ಹೊಲಿಗೆ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಸಹೋದಯ ಕಲಿಕಾ ಸಾಮಥ್ರ್ಯ ಪರೀಕ್ಷೆಯ ರೂವಾರಿಯಾದ ಭ| ಎಸ್ತೆಲಿಟಾ ಬಿ.ಎಸ್ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಉತ್ತಮ ನಾಯಕಿಯಾರಾದ ಶ್ರೀಮತಿ ಸುನೀತಾ, ಶ್ರೀಮತಿ ಶೋಭಾ ಇವರು ಕಳೆದ ವರ್ಷ ಎಲ್ಲಾ ಸ್ವ-ಸಹಾಯ ಸಂಘಗಳ ಆಂತರಿಕ ಮೌಲ್ಯ ಮಾಪನವನ್ನು ನಡೆಸಿಕೊಟ್ಟ ಇವರಿಗೆ ವೇದಿಕೆಯಲ್ಲಿ ಅಭಿನಂದಿಸಲಾಯಿತು.

ಗಂಗೊಳ್ಳಿಂತ್ ದಾದ್ಲ್ಯಾಂಚೆ ಸ್ವ. ಸಹಾಯ್ ಸಂಘಟನಾ ವಿಶಿಂ ಮಾಹೆತ್ ಶಿಬಿರ್ -ಸಮಾಜಿಕ್ ಅಭಿವೃದ್ಧಿ ಆಯೋಗ್ ಸಂಚಾಲಕಾಂಚೆಂ ಸಹಮಿಲನ್


ಗಂಗೊಳ್ಳಿ: ಸಮನ್ವಯ ದಾದ್ಲ್ಯಾಂಚೆ ಸ್ವ. ಸಹಾಯ್ ಸಂಘಟನ್ ಉಡುಪಿ ಜಿಲ್ಲೆ ತಶೆಂಚ್ ಸಮಾಜಿಕ್ ಅಭಿವೃದ್ಧಿ ಆಯೋಗ್ ಗಂಗೊಳ್ಳಿ ಫಿರ್ಗಜೆಚಾ ಮುಕೇಲ್ಪಣಾರ್ ಮಾರ್ಚ್ 5 ತಾರೀಕೆರ್ ಆಯ್ತಾರಾ ದನ್ಪಾರ 3:00 ವೊರಾರ್ ವಾರಾಡ್ಯಾ ಹಂತಾರ್ ದಾದ್ಲ್ಯಾಂಚೆ ಸ್ವ. ಸಹಾಯ್ ಸಂಘಟನಾ ವಿಶಿಂ ಮಾಹೆತ್ ಆನಿ ಸಾಂಧ್ಯಾಂಚೆಂ ಸಹಮಿಲನ್ ತಶೆಂಚ್ ತರ್ಬೆತಿ ಕಾರ್ಯಕ್ರಮ್ ಸಾಂ. ಜುಜೆ ವಾಜ್ ಸಭಾ ಸಾಲಾಂತ್ ಆಸಾ ಕೆಲೆಂ. ಹ್ಯಾ ಕಾರ್ಯಕ್ರಮಾಂಕ್ ಸಂಪನ್ಮೂಳ್ ವ್ಯಕ್ತಿ ಜಾವ್ನ್ ಸಂಪದಾಚೆಂ ದಿರೊಕ್ತರ್ ಬಾ| ರೆಜಿನಾಲ್ಡ್ ಪಿಂಟೊ ಹಾಜರ್ ಆಸ್ಲೆ. ತಾಣಿ ದಾದ್ಲ್ಯಾಂಚೆ ಸ್ವಸಹಾಯ್ ಸಂಘ್ ಆರಂಭ್ ಕರ್ಚೊ ಉದ್ದೇಶ್, ಸಂಘ ಥಾವ್ನ್ ಜಾಲ್ಲೆ ಬರೆಂಪಣ್, ತಶೆಂಚ್ ಸಂಘ ಥಾವ್ನ್ ಕಿತೆಂ ಆಶೆತಾತ್ ಮ್ಹಳ್ಳಿಂ ತೀನ್ ಸವಾಲಾಂ ಸಾಂದ್ಯಾಂಕ್ ದಿಲಿ ಆನಿ ಪಂಗಡ್ ತರ್ಕಾ ಮಾರಿಫಾತ್ ಜಾಪಿ ಬರವ್ನ್ ಸಭೆರ್ ಸಾದರ್ ಕರ್ಚೆಂ ಅವ್ಕಾಸ್ ದಿಲೆಂ . ಉಪ್ರಾಂತ್ ಸ್ವ-ಸಹಾಯ್ ಸಂಘಾಚೊ ಉದ್ದೇಶ್ ಕಿತೆಂ ಆನಿ ಸಂಘ್ ಕಶೆಂ ಚಲಂವ್ಚೆ ಮ್ಹಳ್ಯಾ ವಿಶ್ಯಾಂತ್ ಸವಿಸ್ತಾರ್ ರಿತಿನ್ ಮಾಹೆತ್ ದಿಲಿ. ಫಿರ್ಗಜ್ ಯಾಜಕ್ ಬಾl ತೋಮಸ್ ರೋಶನ್ ಡಿಸೋಜಾನ್ ಸುರ್ವಿಲೆ ಮಾಗ್ಣೆಂ ಶಿಕಯ್ಲೆಂ, ಬಾ। ಎಡ್ವಿನ್ ಡಿಸೋಜಾನ್ ಸಂದೇಶ್ ದಿಲೆಂ. ಹ್ಯಾ ಕಾರ್ಯಕ್ರಮಾಕ್ ಸ್ವ- ಸಹಾಯ್ ಸಂಘಾಚೊ ಕೇಂದ್ರಾಚೊ ಅಧ್ಯಕ್ಷ್ ಆಲ್ಟನ್ ರೆಬೇರೊ ತಶೆಂಚ್ ಹುದ್ದೆದಾರಾಂ ಹಾಜರ್ ಆಸ್ಲಿಂ. ಒಟ್ಟು 120 ಜಣ್ ಸಾಂದ್ಯಾಂನಿ ಹ್ಯಾ ಕಾರ್ಯಾಕ್ರಮಾಂತ್ ಭಾಗ್ ಘೆತ್ಲೆಂ.

ಭವಿಷ್ಯದ ದೃಷ್ಟಿಯಿಂದ ಜೀವ ವಿಮೆ ಮಾಡಿಸಿ :  ಉಪ ಶಾಖೆ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ 

ಶ್ರೀನಿವಾಸಪುರ : ಎಲ್ ಐ ಸಿ ಒಂದು ಜನ ಕ್ಷೇಮಾಭಿವೃದ್ಧಿ ಸಂಸ್ಥೆಯಾಗಿದ್ದು , ಏಜೆಂಟರು ಭವಿಷ್ಯದ ದೃಷ್ಟಿಯಿಂದ ಜೀವ ವಿಮೆ ಮಾಡಿಸುವಂತೆ ಜನರ ಮನವೊಲಿಸಬೇಕು ಎಂದು ತಾಲ್ಲೂಕು ಎಲ್‌ಐಸಿ ಉಪ ಶಾಖೆ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ ಹೇಳಿದರು .

ಪಟ್ಟಣದ ಎಲ್‌ಐಸಿ ಉಪ ಶಾಖೆಯಲ್ಲಿ  ಏರ್ಪಡಿಸಿದ್ದ ಎಲ್‌ಐಸಿ ಏಜೆಂಟರ ಸಭೆಯಲ್ಲಿ ಮಾತನಾಡಿದ ಅವರು , ಎಲ್‌ಐಸಿ ದೇಶದ ಜನರ ಭವಿಷ್ಯದಕಡೆ ಗಮನ ಹರಿಸುವ ಸಂಸ್ಥೆಯಾಗಿ ಮಾತ್ರ ಉಳಿದಿಲ್ಲ. ದೇಶದ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ನೆರವು ನೀಡುತ್ತಿದೆ , ಅದರಿಂದ ದೇಶದ ಪ್ರಗತಿ ಶೀಘ್ರಗತಿಯಲ್ಲಿ ಸಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಎಲ್‌ ಐ ಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್. ಕುಲಕರ್ಣಿ ಮಾತನಾಡಿ , ಸಂಸ್ಥೆ ಏಜೆಂಟರು ಮನೆ ಮನೆಗೆ ಹೋಗಿ ಜೀವ ವಿಮೆ ಮಹತ್ವ ತಿಳಿಸಬೇಕು. ಅವರವರ ಆರ್ಥಿಕ ಮಟ್ಟಕ್ಕೆತಕ್ಕ೦ತೆ ಪಾಲಿಸಿ ಮಾಡಿಸುವಂತೆ ಮನವೊಲಿಸಬೇಕು. ಪಾಲಿಸಿದಾರರಿಗೆ ಉತ್ತಮ ಸೇವೆ ನೀಡಬೇಕು. ಸಮಯ ಬಂದಾಗ ಎಲ್‌ಐಸಿಯಿಂದ ದೊರೆಯುವ ಸೌಲಭ್ಯ ಕೊಡಿಸಬೇಕು. ಜನರ ವಿಶ್ವಾಸಗಳಿಸಬೇಕು ಎಂದು ಹೇಳಿದರು.

ತಾಲ್ಲೂಕಿನ ಎಲ್‌ ಐ ಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್. ಕುಲಕರ್ಣಿ ಏಜೆಂಟರು ಸಭೆಯಲ್ಲಿ ಭಾಗವಹಿಸಿದರು.

ಪತ್ರಕರ್ತರು ಸ್ವಾಭಿಮಾನ , ನಿರ್ದಾಕ್ಷಿಣ್ಯ ಮನೋಭಾವ ಉಳಿಸಿಕೊಂಡು ವೃತ್ತಿಗೌರವ ಬೆಳೆಸಿಕೊಳ್ಳಬೇಕು – ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ. ಗೋಪಿನಾಥ್ 

ಕೋಲಾರ : ಪತ್ರಕರ್ತರು ಸ್ವಾಭಿಮಾನ ಮತ್ತು ನಿರ್ದಾಕ್ಷಿಣ್ಯ ಮನೋಭಾವ ಉಳಿಸಿ ಕೊಂಡು ವೃತ್ತಿ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆದರೆ , ಇಂದಿನ ಬಹುತೇಕ ಪತ್ರಕರ್ತರಲ್ಲಿ ಈ ಎರಡೂ ಗುಣಗಳ ಕೊರತೆ ಕಂಡುಬರುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಿಷಾದಿಸಿದರು.

ಕೆ ಯು ಡಬ್ಲ್ಯೂ ಜೆ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ್ ಅವರನ್ನು ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಅಭಿನಂದಿಸಿ ಅವರು ಮಾತನಾಡಿದರು. ವೃತ್ತಿಯಲ್ಲಿ ಹಮ್ಮುಬಿಮ್ಮು ಇಲ್ಲದೆ ಸ್ವಾಭಿಮಾನ ಹಾಗೂ ನಿರ್ದಾಕ್ಷಿಣ್ಯ ಮನೋ ಭಾವ ಉಳಿಸಿಕೊಂಡಿದ್ದ ಎಂ.ಜಿ. ಪ್ರಭಾಕರ್ ಅವರ ಹೊನ್ನುಡಿ ಪತ್ರಿಕೆಯ ಕಚೇರಿಯು 90 ರ ದಶಕದಲ್ಲಿ ಕೋಲಾರ ಜಿಲ್ಲೆಯ ಸಾಮಾಜಿಕ ಹೋರಾಟಗಳ ವೇದಿಕೆ ಇದ್ದಂತೆ ಕಾರ್ಯನಿರ್ವಹಿಸುತ್ತಿತ್ತು .

ಜಿಲ್ಲೆಯ ಹೋರಾಟಗಳ ಕುರಿತು ಪ್ರಮುಖ ನಿರ್ಧಾರ ಗಳನ್ನು ಹೊನ್ನುಡಿ ಕಚೇರಿಯಲ್ಲಿಯೇ ಕೈಗೊಳ್ಳಲಾಗುತ್ತಿತ್ತು. ಎಂ.ಜಿ.ಪ್ರಭಾಕರ್ ಅವರು ಸಾಮಾಜಿಕ , ಕಾರ್ಮಿಕ , ಹಾಗೂ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿ ವಹಿಸುತಿದ್ದರು ಎಂದು ನೆನಪಿಸಿಕೊಂಡರು. 

ಕೆ ಯು ಡಬ್ಲ್ಯೂ ಜೆ  ಖಜಾಂಚಿ ಎಂ. ವಾಸುದೇವ ಹೊಳ್ಳ ಮಾತನಾಡಿ , ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ ಎಂ.ಜಿ. ಪ್ರಭಾಕರ್. ಈ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಹೇಳಿದರು. ಬೆಂಗಳೂರಿನಲ್ಲಿ ರಾಜ್ಯ ಸಂಘದ ಭವನ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ . 5 ಕೋಟಿ ಹಣ ಬಿಡುಗಡೆಯಾಗಿದ್ದು , 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು. 

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ , ಪತಕರ್ತರಿ ಹೊನ್ನುಡಿ ಪತ್ರಿಕೆ ಕಾಲೇಜು ಇದ್ದಂತೆ . ಮನಸ್ಸು ಮಾಡಿದ್ದರೆ ಎಂ.ಜಿ.ಪ್ರಭಾಕರ್ ಅವರು ಮಂತ್ರಿ ಆಗಬಹುದಿತ್ತು.  ಅಷ್ಟು ಪ್ರಭಾವಿ ಪತ್ರಕರ್ತ. ಎಲ್ಲರಲ್ಲೂ ಆತ್ಮವಿಶ್ವಾಸ ತುಂಬುವ ಪತ್ರಕರ್ತ , ಕನ್ನಡದ ಹೋರಾಟದಲ್ಲೂ ಮುಂಚೂಣಿಯಲ್ಲಿ ನಿಂತರು. ಕರ್ನಾಟಕ ರಾಜ್ಯೋತ್ಸವವನ್ನು ಮಿನಿ ದಸರೆಯಾಗಿ ರೂಪಿಸಿದವರು ಎಂ.ಜಿ.ಪ್ರಭಾಕರ್ ಎಂದು ಬಣ್ಣಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ ವಿ.ಮುನಿರಾಜು ಮಾತನಾಡಿ ,ಎಂ.ಜಿ. ಪ್ರಭಾಕರ್ ಅವರ ಹೋರಾಟದ ಫಲವಾಗಿ ಕೋಲಾರಕ್ಕೆ ರೈಲು ಮಾರ್ಗ ಉಳಿದಿದೆ. ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರು. ಹಲವರಿಗೆ ಮಾರ್ಗ ಹಾಕಿಕೊಟ್ಟಿದ್ದಾರೆ. ಎಂ.ಜಿ. ಪ್ರಭಾಕರ್ ಅವರ ಮಾತಿಗೆ ಜಿಲ್ಲಾಡಳಿತ ನಡುಗುತಿತ್ತು. ಎಷ್ಟು ಸನ್ಮಾನ ಮಾಡಿದರೂ ಸಾಲದು ಎಂದರು. 

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ , ಧೈರ್ಯ ನೀಡುವವರೇ ಮುಂದಿನ ನಾಯಕರು. ಅಂಥವರಲ್ಲಿ ಎಂ.ಜಿ. ಪ್ರಭಾಕರ್ ಕೂಡ ಒಬ್ಬರು . ಅವರು ಎಲ್ಲಾ ಪತ್ರಕರ್ತರಿಗೆ ಮಾದರಿ ಎಂದರು. ಪತ್ರಕರ್ತ ಪ್ರಕಾಶ್ ( ಮಾಮಿ ) , ಉಪಾಧ್ಯಕ್ಷ ಟೇಕಲ್ ಲಕ್ಷ್ಮೀಶ್ , ಎಸ್.ಚಂದ್ರಶೇಖರ್ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ.ಪ್ರಭಾಕರ್ , ನನಗೆ ಸರ್ವಸ್ವ ಪತ್ರಿಕಾ ವೃತ್ತಿ . ಬೇರೊಂದು ಕೆಲಸ ಗೊತ್ತಿಲ್ಲ . ಪತ್ರಿಕೆ ಬೆಳೆಸಲು ನಾನೊಬ್ಬನೇ ಕಾರಣ ಅಲ್ಲ . ಹಲವಾರು ಮಂದಿ ಸೇರಿ ಕಟ್ಟಿದ ಪತ್ರಿಕೆ . ಈ ಪ್ರಶಸ್ತಿ ಎಲ್ಲರಿಗೂ ಸೇರಬೇಕು ಎಂದರು. 

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎನ್.ಮುನಿವೆಂಕಟೇಗೌಡ , ಓಂಕಾರಮೂರ್ತಿ , ಕೆ.ಆಸೀಫ್ ಪಾಷ , ಸಂದಕುಮಾರ್‌ , ಎನ್.ಶಿವಕುಮಾರ್ , ಎನ್ . ಗಂಗಾಧರ್ , ಎಂ.ಲಕ್ಷ್ಮಣ , ಎನ್.ಸತೀಶ್ , ಬಾಲನ್ , ಬೆಟ್ಟಣ್ಣ , ಪವನ್ , ಅಮರ್ , ಕಿತ್ತಂಡೂರು ವೆಂಕಟರಾಮ್ , ಪುರು ಷೋತ್ತಮ್ , ಜೆ.ಅಂಬರೀಶ್ , ಎಂ . ವಿನೋದ್ , ಮುಕ್ತಿಯಾರ್ ಅಹಮದ್ , ಸರ್ವಜ್ಞಮೂರ್ತಿ , ಶ್ರೀಹರಿ , ಶ್ರೀಕಾಂತ್ , ಶಿವುಸಸ್ಯ , ಪ್ರಕಾಶ್ ಉಪಸ್ಥಿತರಿದ್ದರು.

ಕುಂದಾಪುರ :ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಕುಂದಾಪುರ : ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಯಾ ಪ್ರಯುಕ್ತ ಮಹಿಳಾ ಸಮಾನತೆ ಯಾ ಬಗ್ಗೆ ಬೀದಿ ನಾಟಕ ಹಾಗು ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಾರ್ ರ್ಯಾಲಿಯನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ತಾಲೂಕು ಪಂಚಾಯತ್ ಎದುರುಗಡೆ ಪುರಸಭೆ ಅಧ್ಯಕ್ಷ ರಾದ ವೀಣಾ ಭಾಸ್ಕರ್ ಉದ್ಘಾಟನೆ ನೆರೆವೇರಿಸಿ ಮಹಿಳೆಯರು ಇಂದು ಎಲ್ಲ ಕ್ಷೇತ್ರ ದಲ್ಲಿ ತೊಡಗಿಸಿಕೊಂಡು ತನ್ನ ಕಾರ್ಯ ವ್ಯಾಪಿ ಯನ್ನು ಪುರುಷ ರಿಗೆ ಸಮಾನವಾಗಿ ಕೆಲಸ ಮಾಡಿ ಕೊಂಡು ಬರ್ತಾ ಇದೆ. ಮಹಿಳೆಯರು ಶಿಕ್ಷಣ ರಾಜಕೀಯ ಸಮಾಜ ಸೇವೆ ಉದ್ಯೋಗ ಸಾಂಸ್ಕೃತಿಕ ಹಾಗು ಇನ್ನಿತರ ಕಾರ್ಯಕ್ರಮ ದಲ್ಲಿ ತೊಡಗಿಸಿ ಕೊಂಡಿದೆ ಎಂದು ಮಾತನಾಡಿದರು

ಮುಖ್ಯ ಅತಿಥಿಯಾಗಿ ವಲಯ 15 ರ ಲೇಡಿ ಜೇಸಿಸ್ ನ ನಿರ್ದೇಶಕ ರಾದ ಸುಮನಾ ಪೊಳಲಿ ಮಾತನಾಡಿ ಜೆಸಿಐ ಕುಂದಾಪುರ ಸಿಟಿ ಸುಮಾರು 17 ವರ್ಷ ಗಳಿಂದ ಈ ಭಾಗದಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸಿದ ವಲಯ ಹಾಗು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಕೊಂಡ ಸಂಸ್ಥೆ
ಕರೋನ ಸಂದರ್ಭದಲ್ಲಿ ಕಳೆದ ಎರಡು ವರ್ಷ ದಲ್ಲಿ 15 ಸಾವಿರ ಜನರಿಗೆ ಹಸಿದವರಿಗೆ ಊಟ 500 ಮನೆಗೆ ಕಿಟ್ ವಿತರಣೆ ಸುಮಾರು 7 ಸಾವಿರ ಜನರಿಗೆ ಮಾಸ್ಕ್ ನೀಡಿ ಜನ ಮನ್ನಣೆ ಪಡೆದ ಸಂಸ್ಥೆ ಅಗಿದೆ ಎಂದು ನುಡಿದರು
ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಅಧ್ಯಕ್ಷತೆ ವಹಿಸಿದರು
ಸಮಾರಂಭ ದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಸಾದ್ ಮನೀಶ್ ಆಸ್ಪತ್ರೆ ಯಾ ನಿರ್ದೇಶಕರು ಡಾ ಪ್ರಮೀಳಾ ನಾಯಕ್ ಡಾ ವಿಜಯ ಲಕ್ಷ್ಮಿ ಡಾ ಅಮ್ಮಾಜಿ ಡಾ ಸ್ವಾತಿ ಶೇಟ್ ಭಾರತೀಯ ಜೇಸಿಸ್ ನ ರಾಷ್ಟ್ರೀಯ ಸಂಯೋಜಕರಾದ ಕೆ ಕಾರ್ತಿಕೇಯ ಮಧ್ಯಸ್ಥ ವಲಯ ಉಪಾಧ್ಯಕ್ಷ ಅಭಿಲಾಶ್ ಜೆಸಿಐ ಕುಂದಾಪುರ ಸಿಟಿ ಯಾ
ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ
ವಿಜಯ ಭಂಡಾರಿ ಮಂಜುನಾಥ್ ಕಾಮತ್ ನಾಗೇಶ್ ನಾವಡ ಜಯಚಂದ್ರ ಶೆಟ್ಟಿ ಪ್ರಶಾಂತ್ ಹವಾಲ್ದಾರ್ ರಾಘವೇಂದ್ರ ಕುಲಾಲ್ ಗಿರೀಶ್ ಹೆಬ್ಬಾರ್ ಶ್ರೀಧರ್ ಸುವರ್ಣ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಜೊತೆ ಕಾರ್ಯದರ್ಶಿ ಶೈಲಾ ಸದ್ಯಸ್ಯರಾದ ದಿನೇಶ್ ಪುತ್ರನ್ ರೇಷ್ಮ ಕೋಟ್ಯಾನ್ ಸುವರ್ಣ ಅಲ್ಮೆಡ ವಿಠಲ್ ಹೆಬ್ಬಾರ್ ಸರೋಜಾ ಲೋನಾ ಕಲ್ಪನಾ ಭಾಸ್ಕರ್ ಸೌರಬಿ ಪೈ ಮೇಬಲ್ ಡಿ ಸೋಜಾ ಡಾ ಸವಿತಾ ಆಚಾರ್ ಐರಿ ಡಿ ಸೋಜಾ ಸ್ವಪ್ನ ಇರೆನ ಬೇರಟೊ ಯುವ ಜೇಸಿ ಛೇರ್ಮನ್ ಚಂದ್ರಿಕಾ ಕಾಮತ್ ಇನ್ನಿತರರು ಉಪಸ್ಥಿತರಿದ್ದರು
ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ವಂದಿಸಿದರು

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಬಿಷಪರ ನಿವಾಸದಲ್ಲಿರುವ ಕಛೇರಿಯ ನವೀಕರಣದ ಉದ್ಘಾಟನೆ

ಮಂಗಳೂರು: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಬಿಷಪರ ನಿವಾಸದಲ್ಲಿರುವ ಕಛೇರಿಯ ನವೀಕರಣದ ಉದ್ಘಾಟನೆ ಹಾಗೂ ಆಶೀರ್ವಚನ 06-03-2023 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಜರುಗಿತು. ಉದ್ಘಾಟನೆಯನ್ನು ಹಿರಿಯ ಮಾಜಿ ಅಧ್ಯಕ್ಷರಾದ ಶ್ರೀ. ಕಾಸ್ಮಿರ್ ಮಿನೇಜಸ್ ನೆರವೇರಿಸಿದರು. ಆಶೀರ್ವಚನವನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಅಧ್ಯಾತ್ಮಿಕ ನಿರ್ದೇಶಕರಾದ ಅತಿ ವಂದನೀಯ.ಫಾ| ಡಾ.ಜೆ.ಬಿ.ಸಲ್ಡಾನ್ಹ ಅವರು ಕಛೇರಿಯ ಆಶೀರ್ವಚನಗೊಳಿಸಿ, ಪ್ರಾರ್ಥನೆ ಸಲ್ಲಿಸಿದರು.
ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೋ ಪ್ರಸ್ತಾವಿಕ ಭಾಷಣದಲ್ಲಿ ಕಥೊಲಿಕ್ ಸಭಾ ಕಚೇರಿಯ ಅವಶ್ಯಕತೆಯ ಬಗ್ಗೆ ವಿವರವನ್ನು ನೀಡಿ ಎಲ್ಲರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ಕಾಸ್ಮಿರ್ ಮಿನೇಜಸ್‍ರವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ತಮ್ಮ ನುಡಿಯಲ್ಲಿ ಶ್ರೀ ಕಾಸ್ಮಿರ್ ಮಿನೇಜಸ್ ಕ್ಯಾಥೋಲಿಕ್ ಸಭಾದ ಪ್ರಾರಂಭಿಕ ದಿನಗಳ ಹೋರಾಟಗಳು ಮತ್ತು ತೊಂದರೆಗಳ ಬಗ್ಗೆ ನೆನಪಿಸಿದರು ಹಾಗೂ ನಮ್ಮ ಸಮುದಾಯವನ್ನು ಬಳಿಷ್ಟಗೊಳಿಸಲು ಕರೆ ನೀಡಿದರು.
ಶ್ರೀ ಮರಿಟ್ಟೊ ಸಿಕ್ವೇರಾರವರು ಕಛೇರಿಯ ನವೀಕರಣಗೊಳಿಸಿದ್ದಕ್ಕೆ ಅಧ್ಯಕ್ಷರನ್ನು ಅಭಿನಂದಿಸಿದರು ಮತ್ತು ಅವರ ಸಾಮಥ್ರ್ಯ ಮತ್ತು ಕಾರ್ಯವನ್ನು ಶ್ಲಾಘಿಸಿದರು. ಹಾಗೆಯೇ ಅವರು ಬಿಷಪ್ ಹೌಸ್‍ನಲ್ಲಿ ಹೇಗೆ ಕಚೇರಿಯನ್ನು ಪಡೆದರು ಎಂಬುದನ್ನು ನೆನಪಿಸಿಕೊಂಡರು, ನಮ್ಮ ಸಮುದಾಯದ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಹಿಂದಿನ ಎಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಂದು ಮಾದರಿಯಾಗಬೇಕಾಗಿ ಪ್ರೇರೇಪಿಸಿದರು.
ಅತಿ ವಂದನೀಯ.ಫಾ| ಡಾ.ಜೆ.ಬಿ.ಸಲ್ಡಾನ್ಹ, ತಮ್ಮ ಭಾಷಣದಲ್ಲಿ ನಮ್ಮ ಸಮುದಾಯದ ಯೋಗ ಕ್ಷೇಮಕ್ಕಾಗಿ ಕ್ಯಾಥೋಲಿಕ್ ಸಭೆಯು ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ ಒಟ್ಟಾಗಿ ಕೆಲಸ ಮಾಡಿ ನಮ್ಮ ಸಮುದಾಯವನ್ನು ಬಲಿಷ್ಟಪಡಿಸಲು ಕರೆ ಕೊಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್ ಆದ ವಂದನೀಯ.ಫಾ| ಮ್ಯಾಕ್ಸಿಮ್ ರೊಸಾರಿಯೊ, ಹಿಂದಿನ ಆಧ್ಯಾತ್ಮಿಕ ನಿರ್ದೇಶಕರಾದ ಫಾ|ವಾಲ್ಟರ್‍ಡಿಮೆಲ್ಲೊ ಹಾಗೂ ಫಾ|.ಜೆ.ಬಿ.ಕ್ರಾಸ್ತಾ, ಆಮ್ಚೊ ಸಂದೇಶ್ ಆಡಳಿತ ಮಂಡಳಿಯ ಸಂಚಾಲಕರಾದ ಎಲ್ರೊಯ್ ಕಿರಣ್ ಕ್ರಾಸ್ಟೊ, ಸಮನ್ವಯ ಸಮಿತಿ ಸಂಚಾಲಕರಾದ ಶ್ರೀ ನೈಜಿಲ್ ಪಿರೇರಾ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀ.ಎಲ್.ಜೆ. ಫೆನಾರ್ಂಡಿಸ್, ವಾಲ್ಟರ್‍ಡಿಸೋಜಾ, ಆಂಡ್ರ್ಯೂ ನೊರೊನ್ಹಾ, ಪೀಟರ್ ಜೆರಿ ರೋಡ್ರಿಗಸ್, ಫ್ಲೇವಿ ಡಿಸೋಜಾ, ಸಮನ್ವಯ ಸಮಿತಿ ಸಹ- ಸಂಚಾಲಕರಾದ ಶ್ರೀ ವಲೇರಿಯನ್ ಫೆರ್ನಾಂಡಿಸ್ ಮತ್ತು ಕೇಂದ್ರ, ವಲಯ ಮತ್ತು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಕಥೊಲಿಕ್ ಸಭಾ ಕಛೇರಿಯ ನವೀಕರಣ ಕಾರ್ಯಕ್ಕೆ ಸಹಕರಿಸಿದವರಿಗೆ ಪುಷ್ಪಗುಚ್ಛಗಳನ್ನು ನೀಡಿ ಗೌರವಿಸಲಾಯಿತು
ಶ್ರೀ ಎಲ್ರೋಯ್ ಕಿರಣ್ ಕ್ರಾಸ್ಟೊ ವಂದಿಸಿದರು. ಕೋಶಾಧಿಕಾರಿ ಅಲ್ಫೋನ್ಸ್ ಫೆನಾರ್ಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಭಾರತೀಯ ರೆಡ್ ಕ್ರಾಸ್ : ಜನ ಔಷಧಿ ದಿವಸದ ಆಚರಣೆಯ ಕೊನೆಯ ದಿನ ಜನ ಔಷಧಿ ಕೇಂದ್ರದ ಎದುರು ಮಾತ್ರ್ ಶಕ್ತಿ ಅಭಿಯಾನ ಕಾರ್ಯಕ್ರಮ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯಿಂದ ಜನ ಔಷಧಿ ದಿವಸದ ಕೊನೆಯ ದಿನದಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದ ಎದುರು ಮಾತ್ರ್ ಶಕ್ತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿ ಗಳಾಗಿ ಲಯನ್ ಪಿ.ಡಿ.ಜಿ. – ವಿ. ಜಿ ಶೆಟ್ಟಿ (ರೆಡ್ ಕ್ರಾಸ್ ರಾಜ್ಯ ಶಾಖೆಯ ಸಮಿತಿ ಸದಸ್ಯರು ಕೂಡಾ) ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ರೆಡ್ ಕ್ರಾಸ್ ಕುಂದಾಪುರ ಶಾಖೆಯ ಕಾರ್ಯ ವೈಖರಿಯನ್ನು ಕೊಂಡಾಡಿದರು. 25 ಜನ ಮಹಿಳೆಯರನ್ನು ಸನ್ಮಾನಿಸಲಾಯಿತು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಡಾ. ಸೋನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಸಮಿತಿಯ ಸದಸ್ಯರುಗಳಾದ ಶಿವರಾಮ ಶೆಟ್ಟಿ (ಖಜಾಂಚಿ) ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಸದಾನಂದ ಶೆಟ್ಟಿ, ಅಬ್ದುಲ್ ಬಶೀರ್, ದಿನಕರ ಅರ್ ಶೆಟ್ಟಿ, ಸುಧಾಕರ ಶೆಟ್ಟಿ ಹುಂತ್ರಿಕೆ ಮತ್ತು ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.

ಬಸ್ರೂರು : ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ


ಕುಂದಾಪುರ: ಪುಸ್ತಕಗಳನ್ನು ಓದುವುದರಿಂದ ಆತ್ಮವಿಶ್ವಾಸ, ಏಕಾಗ್ರತೆ, ಶಿಸ್ತು, ಸೃಜನಶೀಲತೆ ಹೆಚ್ಚುತ್ತದೆ. ಪುಸ್ತುಕಗಳು ಜ್ಞಾನ ಭಂಡಾರವಿದ್ದಂತೆ. ಪುಸ್ತಕಗಳ ಅಧ್ಯಯನದಿಂದ ಜ್ಞಾನವೃದ್ಧಿಯಾಗುವ ಮೂಲಕ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಮುತ್ತಯ್ಯ ಶೆಟ್ಟಿ ಹೇಳಿದರು.
ಸಾಹಿತಿ ಪಾರ್ವತಿ ಜಿ ಐತಾಳ್ ಅವರು ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಲಾದ ಪುಸ್ತಕಗಳನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂತೋಷ್ ಶೆಟ್ಟಿ, ಅಂಪಾರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ರೋಷಣಿ, ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಅಶೋಕ್ ಎನ್, ಸುಧೀರ್ ಕುಮಾರ್, ರಮೇಶ್ ಪೂಜಾರಿ, ಗಣೇಶ್ ಎಸ್ ಬೀಜಾಡಿ, ಕೆಆರ್ ಎಸ್ ಎಂಇ ಟ್ರಸ್ಟ್ ನ ಅಬ್ದುಲ್ ಜುನೈದ್, ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಸಂಜಿತ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.